RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯಗೆ ಭವ್ಯ ಸ್ವಾಗತ

ಘಟಪ್ರಭಾ:ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯಗೆ ಭವ್ಯ ಸ್ವಾಗತ 

ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯಗೆ ಭವ್ಯ ಸ್ವಾಗತ

ಘಟಪ್ರಭಾ ಅ 19 : ಸಮೀಪದ ಶಿಂದಿಕುರಬೇಟ ಗ್ರಾಮದ ಯುವಾ ಬ್ರಿಗೇಡ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿನೆನಪಿಗೆ ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯ ಭವ್ಯ ಶೋಭಾಯಾತ್ರೆಗೆ ಗುರುವಾರದಂದು ಶ್ರೀ ವಿಠ್ಠಲ ದೇವಸ್ಥಾನದಲ್ಲಿ ಭವ್ಯ ಸ್ವಾಗತ ಕೋರಲಾಯಿತು. ರಥಯಾತ್ರೆಗೆ ಶ್ರೀ ವಿಠ್ಠಲ ದೇವರ ದೇವ ಋಷಿಗಳಾದ ಮುರೇಪ್ಪ ಪೂಜೇರಿ ಹಾಗೂ ಶ್ರೀ ಬಸವೇಶ್ವರ ದೇವರ ದೇವ ಋಷಿಗಳು ಪೂಜೆ ಸಲ್ಲಿಸಿ ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಶೋಭಾ ಯಾತ್ರೆಯ ರಥವು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಕಲವಾದ್ಯಮೇಳಗಳೊಂದಿಗೆ ಜರುಗಿತು. ಈ ಯಾತ್ರೆಯಲ್ಲಿ ಸ್ವಾಮಿ ವಿವೇಕಾನಂದರ ವೇಷಧಾರೆಗಳಾದ ಮಕ್ಕಳು ಗಮನ ಸೆಳೆದರು. ಯುವಕರು, ಗ್ರಾಮಸ್ಥರು, ಯುವ ಬ್ರಿಗೇಡ ಸಂಘಟನೆಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Related posts: