ಗೋಕಾಕ:ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ರೈತರ ಆಗ್ರಹ
ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ರೈತರ ಆಗ್ರಹ
ಗೋಕಾಕ ಅ 1: ಫಸಲ ಭೀಮಾ ಯೋಜನೆಯ ಅವಧಿಯನ್ನು ವಿಸ್ತರಿಸುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಬುಧವಾರದಂದು ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
2018-19 ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಫಸಲ ಭೀಮಾ ಯೋಜನೆಯಡಿ ಹೆಸರು ದಾಖಲಿಸಲು ಜುಲೈ 31 ಕೊನೆಯ ದಿನವಾಗಿತ್ತು, ಆದರೆ ಪಹಣಿ ಪತ್ರಗಳನ್ನು ನೀಡಲು ಬೆಳೆಯ ಪ್ರಮಾಣ ಪತ್ರಗಳು ಅವಶ್ಯವಾಗಿ ಬೇಕಾಗಿದೆ ಎಂಬ ಸರ್ಕಾರದ ಆದೇಶದಿಂದಾಗಿ ರೈತರಿಗೆ ಸರಿಯಾದ ಸಮಯದಲ್ಲಿ ಪಹಣಿ ಪತ್ರಗಳು ದೊರೆಯದೇ ತಾಲೂಕಿನ ಶೇಕಡಾ 20 ರಷ್ಟು ರೈತರು ಮಾತ್ರ ಅರ್ಜಿಗಳನ್ನು ಸಲ್ಲಿಸಿದ್ದು, ಇನ್ನು ಸಾಕಷ್ಟು ರೈತರು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ. ಕಾರಣ ಫಸಲ ಭೀಮಾ ಯೋಜನೆಯಡಿ ಅರ್ಜಿ ಸಲ್ಲಿಸಲು ಇನ್ನು ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.
ಈ ಸಂದರ್ಭದಲ್ಲಿ ರೈತ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ ಪೂಜೇರಿ, ಮುಖಂಡರಾದ ಸತ್ತೆಪ್ಪ ಮಲ್ಲಾಪೂರೆ, ಪುಂಡಲೀಕ ನಿಡಸೋಸಿ, ಪ್ರದೀಪ ಪೂಜಾರಿ, ಶಿವಪುತ್ರ ಪತ್ತಾರ, ಸಿದ್ರಾಮ ಪೂಜೇರಿ, ಪಿ.ಎಚ್.ನಿಡಸೋಸಿ, ಕೃಷ್ಣಾ ಕಚರೆ, ಚಿಕ್ಕು ಕೊಂಗನೋಳಿ, ಸಣ್ಣಪ್ಪ ಮುತ್ತನವರ, ವಿಠ್ಠಲ ಪಾವಡಿ, ಲಕ್ಷ್ಮಣ ಗುಂಡಪ್ಪಗೋಳ ಸೇರಿದಂತೆ ಅನೇಕರು ಇದ್ದರು.