ಖಾನಾಪುರ:ಭಾರಿ ಮಳೆಗೆ ಕೊಚ್ಚಿಹೋದ ಸೇತುವೆ : ಹಲವು ಗ್ರಾಮಗಳಿಗೆ ಸಂರ್ಪಕ ಸ್ಥಗಿತ
ಭಾರಿ ಮಳೆಗೆ ಕೊಚ್ಚಿಹೋದ ಸೇತುವೆ : ಹಲವು ಗ್ರಾಮಗಳಿಗೆ ಸಂರ್ಪಕ ಸ್ಥಗಿತ
ಖಾನಾಪುರ ಜು 16 : ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಸೇತುವೆಯೊಂದು ಕೊಚ್ಚಿ ಹೋಗಿದೆ .ಇದರಿಂದ ಹಲವು ಗ್ರಾಮಗಳ ಸಂರ್ಪಕ ಕಡಿತಗೊಂಡಿದೆ
ಖಾನಾಪುರ ತಾಲೂಕಿನ ಹಲ್ತರಾ ನಾಲೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿತ್ತು. ಈ ಸೇತುವೆ ಖಾನಾಪುರ ಹಾಗೂ ಶಿರೋಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಗೆ ನಿರ್ಮಿಸಲಾಗಿತ್ತು.
ಕಳೆದ ಐದು ವರ್ಷಗಳಲ್ಲಿ ಮೂರು ಸಲ ಈ ಸೇತುವೆ ಕೊಚ್ಚಿ ಹೋಗಿದ್ದು, ಕಾಮಗಾರಿ ಗುಣಮಟ್ಟದ ಕುರಿತು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.