RNI NO. KARKAN/2006/27779|Monday, June 16, 2025
You are here: Home » breaking news » ಘಟಪ್ರಭಾ:ಅಧ್ಯಾತ್ಮದಿಂದ ಜೀವನ ಪಾವನ ವಾಗುತ್ತದೆ : ಶ್ರೀ ಪ್ರಭುಜಿ ಮಹಾರಾಜರು

ಘಟಪ್ರಭಾ:ಅಧ್ಯಾತ್ಮದಿಂದ ಜೀವನ ಪಾವನ ವಾಗುತ್ತದೆ : ಶ್ರೀ ಪ್ರಭುಜಿ ಮಹಾರಾಜರು 

ರಾಜಾಪೂರ ಗ್ರಾಮದಲ್ಲಿ ಜರುಗಿದ ಅಧ್ಯಾತ್ಮ ಸಪ್ತಾಹದಲ್ಲಿ ಇಂಚಗೇರಿ ಮಠದ ಶ್ರೀ ಪ್ರಭುಜಿ ಮಹಾರಾಜರು ಮಾತನಾಡುತ್ತಿರುವದು.

ಅಧ್ಯಾತ್ಮದಿಂದ ಜೀವನ ಪಾವನ ವಾಗುತ್ತದೆ : ಶ್ರೀ ಪ್ರಭುಜಿ ಮಹಾರಾಜರು

ಘಟಪ್ರಭಾ ಮಾ 16 : ಅಧ್ಯಾತ್ಮದಿಂದ ಜೀವಣ ಪಾವನ ವಾಗುತ್ತದೆ ಎಂದು ಇಂಚಗೇರಿ ಮಠದ ಶ್ರೀ ಪ್ರಭುಜಿ ಮಹಾರಾಜರು ಹೇಳಿದರು.
ಅವರು ಸಮೀಪದ ರಾಜಾಪೂರ ಗ್ರಾಮದಲ್ಲಿ ಜರುಗಿದ 31ನೆ ವರ್ಷದ ಇಂಚಗೇರಿ ಅಧ್ಯಾತ್ಮ ಸಪ್ತಾಹದ ಮಂಗಲ ಕಾರ್ಯಕ್ರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮಾನವ ಜನ್ಮಕ್ಕೆ ಬಂದ ಮೇಲೆ ಅಧ್ಯಾತ್ಮಕ್ಕೆ ಸ್ವಲ್ಪವಾದರು ಸಮಯ ಮೀಸಲಿಡಬೇಕು. ಭಗವಂತನ ನಾಮಸ್ಮರಣೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಪ್ರಾಪ್ತವಾಗುತ್ತದೆ ಎಂದು ಹೇಳಿದರು.
ವೇದಿಕೆ ಮೇಲೆ ನಂದಗಾವಿ ಭೂಕೈಲಾಸ ಮಂದಿರದ ಶ್ರೀ ಮಹಾದೇವ ಮಹಾರಾಜರಾಜರು, ಗೊರಗುದ್ದಿ ಆಶ್ರಮದ ತುಕಾರಾಮ ಸ್ವಾಮಿಗಳು, ಸಾವಳಗಿ ಮಠದ ಶಿವಾನಂದ ಸ್ವಾಮಿಗಳು, ಮಾರಾಪೂರದ ಶ್ರೀಮಂತ ಮಹಾರಾಜರು, ಅರವಿಂದ ವಕೀಲರು, ಪರಶುರಾಮ ಕುಡಳ್ಳಿ, ಪ್ರಕಾಶ ಹಳಮನಿ, ರಾಜಾಪೂರ ಗ್ರಾಮದ ಗುರು ಹಿರಿಯರು ಶ್ರೀ ಮಾಧವಾನಂದ ಆಶ್ರಮದ ಸದ್ಬಕ್ತ ಮಂಡಳಿ ಸೇರಿದಂತೆ ಅನೇಕರು ಇದ್ದರು.
ಮುಂಜಾನೆ ಗ್ರಾಮದಲ್ಲಿ ಮಾಧವಾನಂದರ ಪಲ್ಲಕ್ಕಿ ಉತ್ಸವ ವಿಜೃಭಣೆಯಿಂದ ಜರುಗಿತು. ಉತ್ಸವದಲ್ಲಿ ನೂರಾರರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

Related posts: