ಗೋಕಾಕ:ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ :ವಿಜಯಕುಮಾರ ಸೋಲೆಗಾಂವಿ
ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ :ವಿಜಯಕುಮಾರ ಸೋಲೆಗಾಂವಿ
ಗೋಕಾಕ ಜ 25 : ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಒಳ್ಳೇಯ ಪ್ರಜೆಗಳನ್ನಾಗಿ ರೂಪಿಸುವುದು ಶಿಕ್ಷಕರು ಮತ್ತು ಪಾಲಕರದ್ದಾಗಿದೆ ಎಂದು ದೈಹಿಕ ಪರೀವಿಕ್ಷಣಾಧಿಕಾರಿ ವಿಜಯಕುಮಾರ ಸೋಲೆಗಾಂವಿ ಹೇಳಿದರು.
ಅವರು ನಗರದ ನೇತಾಜಿ ಎಜ್ಯುಕೇಶನಲ್ ಆಂಡ್ಯ್ ಸೋಶಿಯಲ್ ವೆಲ್ಫೇರ್ ಸೋಸೈಟಿಯ ಭಾರತೀಯ ವಿದ್ಯಾಮಂದಿರ ಶಾಲೆಯಲ್ಲಿ ಜರುಗಿದ ವಿವಿಧ ಸಾಂಸ್ಕøತೀಕ ಕಾರ್ಯಕ್ರಮ ಮತ್ತು ಎಸ್ಎಸ್ ಎಲ್ಸಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದಿನ ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಶಿಕ್ಷಣ ಕಡೆಗೆ ಒಲವು ತೋರದೇ ಟಿವಿ,ಮೊಬೈಲ್ ನಲ್ಲಿ ಮಗ್ನವಾಗಿ ಶಿಕ್ಷಣದ ಜ್ಞಾನದಿಂದ ಹೊರಗೊಳಿಯುತ್ತಿರುವುದು ಖೇಧಕರ ಸಂಗತಿಯಾಗಿದೆ. ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಾಕಷ್ಟು ಸಮಯ ನೀಡಿ ಅವರಿಗೆ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಅಧ್ಯಕ್ಷ ನವೀನ ಜರತಾರಕರ ಮಾತನಾಡಿ ಮಕ್ಕಳು ಶಿಸ್ತನ್ನು ರೂಢಿಸಿಕೊಳ್ಳಬೇಕು. ಮಕ್ಕಳ ಉಜ್ವಲ ಭವಿಷ್ಯಕ್ಕೆ ಶಿಕ್ಷಣವು ಅತೀಅವಶ್ಯವಾಗಿದ್ದು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಗುಣಮಟ್ಟದ ಶಿಕ್ಷಣವನ್ನು ಪಡೆದುಕೊಳ್ಳಬೇಕೆಂದರು.
ವೇದಿಕೆ ಮೇಲೆ ಸಂಸ್ಥೆಯ ದೀಪಕ ಮೆಳವಂಕಿ, ವಿನಾಯಕ ಶಿರಾಳಕರ, ನಿರ್ದೇಶಕರಾದ ವಿನೋದ ಝಂವರ, ಬಸವರಾಜ ಕಲ್ಲೋಳಿ, ಚಿದಾನಂದ ದೇಮಶೆಟ್ಟಿ, ಚಂದ್ರಕಾಂತ ಈಳಿಗೇರ, ಸಿದ್ದು ವಡೇರ, ಆಡಳಿತಾಧಿಕಾರಿ ಶ್ರೀಮತಿ ವಾಯ್.ಎನ್.ನಣದಿಕರ, ಮುಖ್ಯೋಪಾಧ್ಯಯಿನಿ ಬಿ.ಎಸ್.ಹುಬ್ಬಳ್ಳಿ ಇದ್ದರು.
ಶಿಕ್ಷಕರಾದ ಯು.ಬಿ.ನಾಯ್ಕರ ಸ್ವಾಗತಿಸಿದರು, ಆರ್.ಎನ್.ನುಚ್ಚಿ ನಿರೂಪಿಸಿದರು, ಪಿ.ಎಸ್.ಪಾಟೀಲ ವಂದಿಸಿದರು.