ಗೋಕಾಕ:ಹೊರ ರಾಜ್ಯದ ಪರವಾಣಿಗೆ ಪಡೆದ ವಾಹನಗಳನ್ನು ಓಡಾಟ ನಿಷೇಧಿಸುವಂತೆ ಆಗ್ರಹ : ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರಿಂದ ಆರ್.ಟಿ.ಓ ಗೆ ಮನವಿ
ಹೊರ ರಾಜ್ಯದ ಪರವಾಣಿಗೆ ಪಡೆದ ವಾಹನಗಳನ್ನು ಓಡಾಟ ನಿಷೇಧಿಸುವಂತೆ ಆಗ್ರಹ : ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರಿಂದ ಆರ್.ಟಿ.ಓ ಗೆ ಮನವಿ
ಗೋಕಾಕ ಡಿ 30 : ಹೊರ ರಾಜ್ಯಗಳ ಪರವಾಣಿಗೆ ಪಡೆದು ರಾಜ್ಯದಲ್ಲಿ ಓಡಾಡುವ ವಾಹನಗಳನ್ನು ಪರಿಶೀಲಿಸಿ ಅವುಗಳ ಪರವಾಣಿಗೆಯನ್ನು ರದ್ದು ಪಡೆಸುವಂತೆ ಒತ್ತಾಯಿಸಿ ಕರವೇ ಸ್ವಾಭಿಮಾನಿ ಬಣದ ಕಾರ್ಯಕರ್ತರು ನಗರದಲ್ಲಿ ಇಂದು ಪ್ರತಿಭಟನೆ ನಡೆಯಿಸಿ ಮೋಟಾರ್ ವಾಹನ ನಿರೀಕ್ಷಕರಿಗೆ ಮನವಿ ಅರ್ಪಿಸಿದರು
ನಗರದ ಎ.ಆರ್.ಟಿ.ಓ ಕಛೇರಿಯಲ್ಲಿ ಸೇರಿದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದರು
ಕಳೆದ ಹಲವಾರು ದಿನಗಳಿಂದ ನಗರದಲ್ಲಿ ಹೊರ ರಾಜ್ಯದ ಪರವಾಣಿಗೆ ಪಡೆದು ರಾಜ್ಯದಲ್ಲಿ ಓಡಾಟ ನಡೆಸುತ್ತಿರುವ ವಾಹನಗಳ ಸಂಖ್ಯೆ ಏರುತ್ತಿದೆ, ಇಂತಹ ಪರವಾಣಿಗೆ ಪಡೆಜ ವಾಹನ ಮಾಲೀಕರು ರಾಜ್ಯಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರಲ್ಲದೆ ಹಲವು ಅಕ್ರಮಗಳಿಗೆ ಹೊರ ರಾಜ್ಯದ ಪರವಾಣಿಗೆ ಪಡೆದ ವಾಹನಗಳು ಬಳಕೆಯಾಗುತ್ತಿವೆ ಇದರಿಂದ ಅಪರಾಧಗಳು ಹೆಚ್ಚುತ್ತಿವೆ ಆದ್ದರಿಂದ ಇಂತಹ ವಾಹನಗಳನ್ನು ಪರಿಶೀಲಿಸಿ ಅವುಗಳಿಗೆ ದಂಢ ವಿಧಿಸಿ, ಶುಲ್ಕ ವಿಧಿಸಿ ಕರ್ನಾಟಕ ರಾಜ್ಯದ ಪರವಾಣಿಗೆ ನೀಡಲು ಕ್ರಮ ಜರುಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ .
ಈ ಸಂದರ್ಭದಲ್ಲಿ ವೇದಿಕೆಯ ಮಹಿಳಾ ಜಿಲ್ಲಾಧ್ಯಕ್ಷೆ ಯಶೋದಾ ಬೀರಡಿ , ತಾಲೂಕಾಧ್ಯಕ್ಷ ಸಂತೋಷ ಖಂಡ್ರಿ , ಯುವ ಘಟಕದ ಜಿಲ್ಲಾಧ್ಯಕ್ಷ ಪವನ ಮಹಾನಿಂಗಪೂರ , ಮಂಜುನಾಥ್ ಝಲ್ಲಿ , ಸೇರಿದಂತೆ ಅನೇಕರು ಇದ್ದರು