ಗೋಕಾಕ:ಧುಪದಾಳ ಗ್ರಾಮ ಪಂಚಾಯತಿ ವತಿಯಿಂದ ಸಚಿವ ಜಾರಕಿಹೊಳಿ ಅವರಿಗೆ ಸನ್ಮಾನ
ಧುಪದಾಳ ಗ್ರಾಮ ಪಂಚಾಯತಿ ವತಿಯಿಂದ ಸಚಿವ ಜಾರಕಿಹೊಳಿ ಅವರಿಗೆ ಸನ್ಮಾನ
ಘಟಪ್ರಭಾ ನ 4 : ಸಮೀಪದ ಧುಪದಾಳ ಗ್ರಾಮ ಪಂಚಾಯತಿಗೆ ಮುಖ್ಯ ಮಂತ್ರಿ ಗ್ರಾಮ ವಿಕಾಸ ಯೋಜನೆ ಅಡಿಯಲ್ಲಿ 1 ಕೋಟಿ ಅನುದಾನ ಬಿಡುಗಡೆ ಮಾಡಲು ಸಹಕರಿಸಿದ ಸಹಕಾರ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಗ್ರಾಮ ಪಂಚಾಯತಿಯಿಂದ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಟಿ.ಆರ್.ಕಾಗಲ, ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ, ಹಿರಿಯರಾದ ಡಿ.ಎಂ.ದಳವಾಯಿ, ತಾ.ಪಂ ಸದಸ್ಯ ಲಗಮನ್ನಾ ನಾಗನ್ನವರ, ಗ್ರಾ.ಪಂ ಸದಸ್ಯರಾದ ಶೇಖರ ಹುಣಕುಂಟಿ, ಕಲ್ಲಪ್ಪಾ ಸನದಿ, ನಾಗರಾಜ ನಾಯಿಕ, ಕಲ್ಲೋಳೆಪ್ಪಾ ಗಾಡಿವಡ್ಡರ, ಜಿನಪ್ಪಾ ಕಮತಿ, ಶೇಖರ ರಜಪೂತ, ಮಲಕವಿ ಗಾಡಿವಡ್ಡರ, ರಜಿಯಾ ಕಡಲಗಿ, ಹಸೀನಾ ಜತ್ತಿ, ಸಾವಿತ್ರಾ ಕುಂದರಗಿ, ಸುವರ್ಣಾ ಮುತ್ತೆಪ್ಪಗೋಳ, ರೇಣುಕಾ ಗಾಡಿವಡ್ಡರ, ಪರಸಪ್ಪಾ ಗಾಡಿವಡ್ಡರ, ತಾನಾಜಿ ಕೋಳಿ ಸೇರಿದಂತೆ ಅನೇಕ ಗ್ರಾ.ಪಂ ಸದಸ್ಯರು ಗಣ್ಯರು ಇದ್ದರು.