RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಯೋಧರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು : ರಾಮಚಂದ್ರ ಕಾಕಡೆ ಅಭಿಮತ

ಗೋಕಾಕ:ಯೋಧರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು : ರಾಮಚಂದ್ರ ಕಾಕಡೆ ಅಭಿಮತ 

ಯೋಧರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು : ರಾಮಚಂದ್ರ ಕಾಕಡೆ ಅಭಿಮತ

ಗೋಕಾಕ ಜ 15 : ರಾಷ್ಟ್ರ ಸೇವೆಯನ್ನೇ ಧ್ಯೇಯವಾಗಿಸಿ ಕೊಂಡು ಹಗಲಿರುಳು ಹೋರಾಡುತ್ತಿರುವ ಯೋಧರ ಶ್ರಮವನ್ನು ನಾವೆಲ್ಲರೂ ಗೌರವಿಸಬೇಕು ಎಂದು ಶಿಕ್ಷಕ ರಾಮಚಂದ್ರ ಕಾಕಡೆ ಹೇಳಿದರು

ಬುಧವಾರದಂದು ನಗರದ ರಹೆಮಾನ ಫೌಂಡೇಶನ್ ಕಾರ್ಯಲಯದಲ್ಲಿ ರಹೆಮಾನ ಫೌಂಡೇಶನ್ ವತಿಯಿಂದ ಹಮ್ಮಿಕೊಂಡ 77ನೇ ಭಾರತೀಯ ಸೇನಾ ದಿನಾಚರಣೆ ಕಾರ್ಯಕ್ರಮದ ಪ್ರಯುಕ್ತ ಮಾಜಿ ಸೈನಿಕರನ್ನು ಸತ್ಕರಿಸಿ ಅವರು ಮಾತನಾಡಿದರು.

ಭಾರತ ದೇಶದಲ್ಲಿ ರೈತರು ಮತ್ತು ಯೋಧರು ದೇಶದ ಬೆನ್ನೆಲುಬಾಗಿ ಕಾರ್ಯಮಾಡುತ್ತಿದ್ದಾರೆ. ಅವರನ್ನು ನೆನಪಿಸಿ ಅವರಿಗೆ ಗೌರವಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ರಹೆಮಾನ ಪೌಂಡೇಶನ್ ಈ ಕಾರ್ಯಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು ಮಹಾನ್ ದೇಶಭಕ್ತ, ಕ್ರಾಂತಿಕಾರಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಅವರಂತಹ ದೇಶಾಭಿಮಾನ ಈ ದೇಶದ ಸೈನಿಕರಿಗೆ ಆರ್ದಶವಾಗಬೇಕು. ನೇತಾಜಿ ಎಂದೇ ಖ್ಯಾತರಾಗಿರುವ ಸುಭಾಷ್ ಚಂದ್ರ ಬೋಸ್ ಅವರು ‘ನನಗೆ ರಕ್ತ ಕೊಡಿ ಮತ್ತು ನಾನು ನಿಮಗೆ ಸ್ವಾತಂತ್ರ್ಯ ನೀಡುತ್ತೇನೆ’ ಎಂಬ ಘೋಷಣೆಯನ್ನು ನೀಡಿದ್ದು, ಇದು ಇಂದಿಗೂ ರಾಷ್ಟ್ರದ ಪ್ರತಿಯೊಬ್ಬ ದೇಶಪ್ರೇಮಿಗಳ ಹೃದಯದಲ್ಲಿ ಮಸಿ ಬಳಿದಿದೆ ಮಾತ್ರವಲ್ಲದೆ ನಮ್ಮ ಬಗ್ಗೆ ನಮಗೆ ನೆನಪಿಸುತ್ತಿದೆ. ಇಂತಹ ಮಹಾನ ದೇಶಭಕ್ತರನ್ನು ನಾವು ಆದರ್ಶವಾಗಿಟ್ಟುಕೊಂಡು ಸದೃಢ, ಸುಭದ್ರ ದೇಶವನ್ನು ಕಟ್ಟಬೇಕಾಗಿದೆ ಆ ನಿಟ್ಟಿನಲ್ಲಿ ನಾವೆಲ್ಲರೂ ಜಾತಿ,ಮತ್, ಪಂಥಗಳ ಜಂಜಾಟದಿಂದ ಹೊರಬಂದು ದೇಶಕ್ಕಾಗಿ ಒಂದಾಗಿ ಬಾಳಿ ಬದುಕಬೇಕಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಮೌಲಾನಾ ಬಶೀರ್ ಉಲ್ಲಹಕ್ಕ ಕಾಶಮಿ ದೇಶದಲ್ಲಿ ಇಂದು ಶಾಂತಿ, ಸುವ್ಯವಸ್ಥೆ ಕಾಪಾಡುವಲ್ಲಿ ಸೈನಿಕರು ಕೊಡುಗೆ ದೊಡ್ಡದಾಗಿದ್ದು , ಆಧ್ಯಾತ್ಮದಲ್ಲಿಯೂ ದೇಶಕಾಯುವ ಸೈನಿಕರು ಸ್ವರ್ಗದಲ್ಲಿ ಸ್ಥಾನ ಪಡೆಯಲ್ಲಿದ್ದಾರೆ ಎಂದು ಬಣ್ಣಿಸಲಾಗಿದೆ. ಹಾಗಾಗಿ ಎರಡು ಲೋಕದಲ್ಲಿ ಸೈನಿಕರಿಗೆ ಉನ್ನತ ಸ್ಥಾನದಲ್ಲಿದ್ದಾರೆ. ಅವರನ್ನು ಪ್ರತಿಯೊಬ್ಬರೂ ಗೌರವದಿಂದ ಕಾಣಬೇಕು ಎಂದು ಹೇಳಿದರು

ಈ ಸಂದರ್ಭದಲ್ಲಿ ಪೌಂಡೇಶನ್ ನ ಮುಖ್ಯಸ್ಥ ಮೌಲಾನಾ ಅಬ್ದುಲಾ ಸಾಬ ರಹೆಮಾನಿ, ಮೌಲಾನಾ ಬಶೀರ್ ಸಾಬ ಇನಾಮಿ,
ಖಾರಿ ಯೂನೂಸ್ ಇನಾಮಿ, ಇಲಾಹಿ ಖೈರದಿ, ಆಬಿದ ಜಗದಾಳ, ಮಹ್ಹದ ಫನಿಬಂದ್, ಸಾದಿಕ ಹಲ್ಯಾಳ, ಮೊಹಮ್ಮದ್ ಅಲ್ಲಿ ಮಾರಿಹಾಳ, ಮಾಜಿ ಸೈನಿಕರುಗಾಳದ ಅಪ್ಪಣ್ಣ ಅಕ್ಕಿ, ಪುಂಡಲೀಕಪ್ಪ ಕಾಂಬಳೆ, ಮಲಿಕ್ ಜಮಾದರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: