RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಎಲ್ಲರನ್ನು ಒಗ್ಗೂಡಿಸಿ, ಒಟ್ಟಿಗೆ ಕರೆದುಕೊಂಡು ಹೋಗುವ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಬೇಕಾಗಿದೆ : ಸಚಿವ ಸತೀಶ ಜಾರಕಿಹೊಳಿ

ಗೋಕಾಕ:ಎಲ್ಲರನ್ನು ಒಗ್ಗೂಡಿಸಿ, ಒಟ್ಟಿಗೆ ಕರೆದುಕೊಂಡು ಹೋಗುವ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಬೇಕಾಗಿದೆ : ಸಚಿವ ಸತೀಶ ಜಾರಕಿಹೊಳಿ 

ಎಲ್ಲರನ್ನು ಒಗ್ಗೂಡಿಸಿ, ಒಟ್ಟಿಗೆ ಕರೆದುಕೊಂಡು ಹೋಗುವ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಬೇಕಾಗಿದೆ : ಸಚಿವ ಸತೀಶ ಜಾರಕಿಹೊಳಿ
ಗೋಕಾಕ ಎ 26 : ಎಲ್ಲರನ್ನು ಒಗ್ಗೂಡಿಸಿ, ಒಟ್ಟಿಗೆ ಕರೆದುಕೊಂಡು ಹೋಗುವ ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ಬೇಕಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಶುಕ್ರವಾರದಂದು ಕಾಂಗ್ರೆಸ್ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಅವರ ಪರ ಪ್ರಚಾರಾರ್ಥ ನಗರದ ಜಾಮೀಯಾ ಮಸೀದಿ, ಉಪ್ಪಾರ ಓಣಿ, ಆದಿ ಜಾಂಭವ ನಗರ, ಕುರುಬರ ಓಣಿಯಲ್ಲಿ ಕೈಗೊಂಡ ಪ್ರಚಾರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು

ಸಮಾನತೆಯ ಸರಕಾರ ಕಳೆದ 10-ವರ್ಷಗಳಿಂದ ಇಲ್ಲಾ ಅದನ್ನು ಬದಲಿಸುವ ಕಾರ್ಯಮಾಡಬೇಕು. ಸುಳ್ಳಿಗೆ ಸೋಲಿಸಿ, ಸತ್ಯವನ್ನು ಗೆಲ್ಲಿಸಬೇಕಾಗಿದ್ದು, ದೇಶ ಒಳ್ಳೆಯ ಸರಕಾರವನ್ನು ಎದುರು ನೋಡುತ್ತಿದೆ. ಎಲ್ಲವನ್ನೂ ಒಂದೇ ಕಣ್ಣಿನಿಂದ ನೋಡು ಕಾಂಗ್ರೆಸ್ ಪಕ್ಷದ ಸರಕಾರ ಮತ್ತೆ ಈ ದೇಶದ ಚುಕ್ಕಾಣಿ ಹಿಡಿಯಬೇಕು . ಈ ಬಾರಿ ಅಲ್ಪಸಂಖ್ಯಾತರು ಶೇಕಡಾ 90 % ಪ್ರತಿಶತ ಮತದಾನ ಮಾಡಬೇಕಲ್ಲದೆ ಎಲ್ಲರೂ ತಪ್ಪದೆ ಮತಗಟ್ಟೆಗೆ ಬರುವದಲ್ಲದೆ ತಮ್ಮವರನ್ನು ಕರೆದುಕೊಂಡು ಬಂದು ಮತಹಾಕಬೇಕು.
ಬಾರತದ ದೇಶವನ್ನು ಕೋರಿಯಾ ದೇಶವಾಗಲು ಬಿಡಬಾರದು.
ಯುವ ಉತ್ಸಾಹಿ ಯುವಕ ಮೃಣಾಲ ಹೆಬ್ಬಾಳಕರ ಅವರಿಗೆ ಮತನೀಡಿ ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳಿಂದ ಜನ ಬಲಿಷ್ಠ ಮತ್ತು ಸಧೃಡರಾಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಮಗೆ ಶಕ್ತಿ ನೀಡಬೇಕು. ಸಿದ್ದರಾಮಯ್ಯ ಅವರ ಕಾಂಗ್ರೆಸ್ ಪಕ್ಷ ಬಡವರ, ರೈತರ ಮತ್ತು ಕಾರ್ಮಿಕರ ಪರವಾದ ಪಕ್ಷ ಕಾಂಗ್ರೆಸ್ ಬಡವರಿಗೆ ಹಲವಾರು ಯೋಜನೆಗಳನ್ನು ತಂದಿದೆ. ನಾವು, ನೀವು ಕೂಡಿ ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು. ಕಾಂಗ್ರೆಸ್ ಪಕ್ಷವು ರಾಜ್ಯದ ಮಾದರಿಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ಸೇರಿದಂತೆ ಐದು ಹೊಸ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಹೇಳಿದ್ದು, ಪಕ್ಷ ಅಧಿಕಾರಕ್ಕೆ ಬಂದ ನಂತರ ಎಲ್ಲವನ್ನು ಅನುಷ್ಠಾನ ತರಲಾಗುವುದು. ಚಿಕ್ಕೋಡಿಯಲ್ಲಿಯೂ ಸಹ ಪ್ರಿಯಾಂಕಾ ಅವಳನ್ನು ಬೆಂಬಲಿಸಿ ಸಂಬಂಧಿಕರಿಗೆ ಹೇಳಿ ಮತ ಹಾಕಿಸಬೇಕು ಅವಳಿಗೂ ಸಹ ರಾಜಕೀಯವಾಗಿ ಬೆಳಯಲು ಅವಕಾಶ ನೀಡಿ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಅಶೋಕ ಪೂಜಾರಿ, ನಗರ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗ ದಳವಾಯಿ, ಮಹಾಂತೇಶ ಕಡಾಡಿ , ಜಗ್ಗಣ್ಣ ಬಿ.ಕೆ, ಚಂದ್ರಶೇಖರ್ ಕೊಣ್ಣೂರ, ಹಾಜಿ ಕುತಬುದ್ದೀನ ಬಸಾಪೂರಿ, ನಜೀರ, ಶೇಖ್, ಇಲಾಹಿ ಖೈರದಿ, ಹಾಜಿ ಅಬುಲಹಸನ, ಜಾಕೀರ ಕುಡಚಿಕರ, ಮಾಯಪ್ಪ ತಹಶೀಲ್ದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: