ಗೋಕಾಕ:ಬಿಜೆಪಿ ಸರಕಾರ ಅಲಿಬಾಬ ಮತ್ತು ನಾಲವತ್ತು ಕಳ್ಳರ ಸರಕಾರ : ಮಾಜಿ ಮುಖ್ಯಮಂತ್ರಿ

ಬಿಜೆಪಿ ಸರಕಾರ ಅಲಿಬಾಬ ಮತ್ತು ನಾಲವತ್ತು ಕಳ್ಳರ ಸರಕಾರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ
ಗೋಕಾಕ ಏ 24 : ಬಿಜೆಪಿ ಸರಕಾರ ಅಲಿಬಾಬ ಮತ್ತು ನಾಲವತ್ತು ಕಳ್ಳರ ಸರಕಾರ, ಗೋಕಾಕನಲ್ಲಿ ಈ ಬಾರಿ ಜನರು ಬದಲಾವಣೆ ಮಾಡುವ ತಿರ್ಮಾಣ ಮಾಡಿದ್ದಾರೆ. ರಾಜ್ಯದ ಜನರು ಸಹ ಬದಲಾವಣೆ ಬಯಸಿದ್ದಾರೆ. ರಾಜ್ಯದ ಎಲ್ಲಕಡೆ ಬದಲಾವಣೆ ಗಾಳಿ ಬಿಸುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸೋಮವಾರದಂದು ನಗರದಲ್ಲಿ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡ ಗೋಕಾಕ ವಿಧಾನಸಭಾ ಮತಕ್ಷೇತ್ರದ ಪ್ರಜಾಧ್ವನಿ ಸಮಾವೇಶವನ್ನು ಡೋಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು
ಕರ್ನಾಟಕ ಬಿಜೆಪಿ ಸರಕಾರ ಜನ ವಿರೋಧಿ ಸರಕಾರ, ಭ್ರಷ್ಟ ಸರಕಾರವನ್ನು ಬದಲಾವಣೆ ಮಾಡಿ ಮತ್ತೊಮ್ಮೆ ಕಾಂಗ್ರೆಸ್ ಗೆ ಅಧಿಕಾರ ನೀಡಲು ರಾಜ್ಯದ ಜನತೆ ಅಭಿಲಾಷೆಯಾಗಿದ್ದು, ಈ ಬಾರಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುವದು ಶತಸಿದ್ದ.
2013 ರಲ್ಲಿ ಕಾಂಗ್ರೆಸ್ ಪಕ್ಷ ಸಮಾಜದ ಬಡವರಿಗೆ ಹಲವಾರು ಯೋಜನೆಗಳನ್ನು ನೀಡಿ ನುಡಿದಂತೆ ನಡೆಯುವ ಸರಕಾರವನ್ನು ನೀಡಿದ್ದೇವೆ. ಪ್ರಣಾಳಿಕೆಯಲ್ಲಿಯ ಎಲ್ಲಾ ಭರವಸೆ 158 ಭರವಸೆಗಳನ್ನು ಈಡೇರಿಸಿದ್ದೇವೆ. ಹಲವಾರು ಭಾಗ್ಯವನ್ನು ನೀಡಿ ಸಮಾಜವನ್ನು ಕಟ್ಟಿ , ಬಡವರ ಬದುಕನ್ನು ಹಸನ ಮಾಡುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಬಿಜೆಪಿ ನೀಡಿದ 600 ಭರವಸೆಗಳಲ್ಲಿ ಕೆವಲ 50 ಭರವಸೆಗಳನ್ನು ಈಡೇರಿಸಿ ಭ್ರಷ್ಟಾಚಾರವನ್ನು ಮಾಡಿದ್ದಾರೆ ಇಂದು ರಾಜ್ಯದ ಬೀದಿ, ಬೀದಿಗಳಲ್ಲಿ ಬಿಜೆಪಿ ಅತ್ಯಂತ ಭ್ರಷ್ಟ ಸರಕಾರ ಎಂದು ಹೇಳುತ್ತಿದ್ದಾರೆ. ನರೇಂದ್ರ ಮೋದಿ ಅವರು ನಾನು ತಿನ್ನುದಿಲ್ಲ. ತಿನ್ನೋಕೆ ಬಿಡೋದಿಲ್ಲ ಎಂದು ಹೇಳಿದರು. ಕರ್ನಾಟಕದಲ್ಲಿ 40 ಪ್ರತಿಶತ ಕಮಿಷನ್ ತಿನ್ನಲು ಯಾಕೆ? ಅವಕಾಶ ಕೊಟ್ಟಿದ್ದದೀರಿ ಎಂದು ಕಿಡಿಕಾರಿದರು. ತಿಂದು ಸಹ ರಾಜ್ಯವನ್ನು ಅಭಿವೃದ್ಧಿ ಮಾಡಿಲ್ಲ.ರಮೇಶ ಜಾರಕಿಹೊಳಿ ಬಹಳ ಸಿನಿಯರ್ ಅವರಿಗೆ ಒಂದು ಮನೆ ಕೊಡಿಸಲು ಸಾಧ್ಯವಾಗಿಲ್ಲಶ ಎಂದರು.
ಬಿಜೆಪಿ ಎಂದರೆ ಸುಳ್ಳಿನ ಪ್ಯಾಕ್ಟರಿಯಾಗಿದೆ. ನಾವು ಮಾಡಿ ಯಾವುದೇ ಯೋಜನೆಗಳನ್ನು ಮುಂದೆವರೆಸಿಲ್ಲ ಬಡವರ ವಿರೋಧಿಗಳು. ಗೋಕಾಕದಲ್ಲಿ ಭಯಧ ವಾತಾವರಣ ನಿರ್ಮಾಣ ಮಾಡಿದ್ದಾರೆ.ಇಂತಹವರು ರಾಜಕೀಯದಲ್ಲಿ ಇರಬಾರದು. ಸಮ್ಮಿಶ್ರ ಸರಕಾರ ಕಿತ್ತು ಹಾಕಲು ರಾಜೀನಾಮೆ ನೀಡಿದರು. ಅಧಿಕಾರದ ಆಮಿಷಕ್ಕೆ ಸರಕಾರ ಕೆಡವಿ, ಮಂತ್ರಿ ಸಹ ಆಗಲ್ಲಿಲ್ಲ ಇವರು ನಿಮ್ಮ ಜನಪ್ರತಿನಿಧಿ ಆಗಬಾರದು.
ಯಾರಿಗೂ ಹೆದರಬೇಕಾಗಿಲ್ಲ ಮುಕ್ತವಾಗಿ ಮತನೀಡಿ ಅವರನ್ನು ಮನೆಗೆ ಕಳುಹಿಸಬೇಕು. ನೂರಕ್ಕೆ ನೂರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬರುತ್ತದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ.ಭಯದ, ಹೆದರಿಕೆಯ ವಾತಾವರಣ ನಿರ್ಮಾಣವಾಗಿದೆ. ಇಡೀ ಕಾಂಗ್ರೆಸ್ ಪಕ್ಷ ಮಹಾಂತೇಶ ಅವರ ಬೆನ್ನಿಗೆ ನಿಲ್ಲುತ್ತದೆ. ಸವದಿ, ಶೆಟ್ಟರ್ ಅವರನ್ನು ಪಕ್ಷದಿಂದ ಆಚೆ ತಳ್ಳಿದವರು ಯಾರ ರಕ್ಷಣೆ ಮಾಡಲು ಸಾಧ್ಯವಿಲ್ಲ. ಆರ್.ಎಸ್.ಎಸ್. ನ ಕೆಲವರು ಸರಕಾರವನ್ನು ನಡೆಸುತ್ತಿದ್ದಾರೆ. ಬಸವಣ್ಣನವರು ನುಡಿದಂತೆ ನಡೆದಂತೆ ಕಾಂಗ್ರೆಸ್ ಪಕ್ಷವೂ ಸಹ ನುಡಿದಂತೆ ನಡೆದಂತೆ ನಡೆಯುತ್ತದೆ. ಕಾಂಗ್ರೆಸ್ ಗೆ ಒಂದು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ನರೇಂದ್ರ ಮೋದಿ ಅವರು ಅಚ್ಚೆದಿನ 9 ವರ್ಷವಾದರೂ ಬರಲೇ ಇಲ್ಲಾ., ಸುಳ್ಳು ಹೇಳುವ ಸರಕಾರವನ್ನು ಕಿತ್ತು ಕಾಂಗ್ರೆಸ್ ಸರಕಾರ ತರಲು ತಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕು ಎಂದು ಮನವಿ ಮಾಡಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮಾತನಾಡಿ ಬರುವ ಮೇ 10 ರಂದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಕಾಂಗ್ರೆಸ್ ಪರವಾಗಿ ನಿಂತು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು.
ಹಿಂದಿನ ಸಿದ್ದರಾಮಯ್ಯ ಅವರ ಸರಕಾರ ಭ್ರಷ್ಟಾಚಾರ ರಹಿತ ಸರಕಾರ ಬರಬೇಕು ಅದಕ್ಕೆ ನಿವೆಲ್ಲರೂ ಅಭಿವೃದ್ಧಿ ಪರ ಮತ ನೀಡಬೇಕು. ಶಿಕ್ಷಣ, ಕೈಗಾರಿಕಾ ಉದ್ಯಮಿಗಳು ಪ್ರಾರಂಭವಾಗಬೇಕು. ಇದಲ್ಲೆ ಜಾರಿಗೆ ಬರಬೇಕು ಎಂದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಬೇಕು. ಸಾಕಷ್ಟು ಜಿದ್ದಾಜಿದ್ದಿನಿಂದ ನಾವು ಕಾಂಗ್ರೆಸ್ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಮೋದಿ ಸರಕಾರ ಬೆಲೆ ಏರಿಕೆ ತಪ್ಪಿಸಲು ಹಸ್ತಕ್ಕೆ ಮತನೀಡ ಬೇಕು ಎಂದು ಮನವಿ ಮಾಡಿದರು.
ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ ಅಶೋಕ ಪೂಜಾರಿ ಅವರು ಯಾವುದೇ ರೀತಿಯ ಸಂಧಾನ ಮಾಡದೆ ರಾಜಕೀಯ ಮಾಡಿದ್ದಾರೆ. ವಿರೋಧಿಗಳು ಅವರ ಹೆಸರು ಕೆಡಸಿದರು ಸಹ ಯಾವುದೇ ತಲೆ ಕೆಡಿಸಿಕೊಳ್ಳದೆ ಹೋರಾಟ ಮಾಡಿ ಜನರ ಆಶೋತ್ತರಗಳಿಗೆ ಸ್ವಂದಿಸುತ್ತಿದ್ದಾರೆ. ಸರಕಾರ ಬಂದ ನಂತರ ನಾಯಕರಲ್ಲಿ ಕೈ ಮುಗಿದು ನಿಮಗೆ ಉನ್ನತ ಸ್ಥಾನವನ್ನು ಕೊಡಲು ಮನವಿ ಮಾಡುತ್ತೇನೆ . ಗೋಕಾಕದಲ್ಲಿ ಬದಲಾವಣೆ ಅಲೆ ಬಿಸುತ್ತಿದ್ದೆ ಅದರ ಪ್ರಯೋಜನವನ್ನು ನಾವೆಲ್ಲರೂ ಪಡೆದುಕೊಂಡು ಕಾಂಗ್ರೆಸ್ ಪಕ್ಷದ ಕೈ ಬಲಪಡಿಸಬೇಕು ಎಂದು ಮನವಿ ಮಾಡಿದ ಅವರು ನುಡಿದಂತೆ ನಡೆದ ನಾಯಕ ಸಿದ್ದರಾಮಯ್ಯ ಅವರನ್ನು ಬೆಂಬಲಿಸಲು ಕಾಂಗ್ರೆಸ್ ಪಕ್ಷಕ್ಕೆ ಮತನೀಡಬೇಕು. ಬಿಜೆಪಿಯ 40% ಸರಕಾರವನ್ನು ಮತ್ತೆ ಅಧಿಕಾರ ತರಬಾರದು ಎಂದು ಮನವಿ ಮಾಡಿದರು.
ಲಕ್ಷ್ಮಣ ಸವದಿ ಮಾತನಾಡಿ ರಮೇಶ ಅಣ್ಣ ಏನು ಚಿಂತೆಮಾಡಬೇಡ ಅಥಣಿಯಲ್ಲಿ ಇರಲು ನನ್ನ ಮನೆ ಕೊಟ್ಟು ಜೊತೆಗೆ ಊಟ ಚಹಾ ನಾನೇ ಕೋಡತ್ತೇನೆ. ಅಲ್ಲೇ ಇದ್ದು ಪ್ರಚಾರ ಮಾಡು. . ಬಿಜೆಪಿ ಪಕ್ಷ ಈ ಸಾರಿ ವಿರೋಧ ಪಕ್ಷದಲ್ಲಿ ಕುರುವದು ನಿಶ್ಚಿತ ಆ ಕಾರಣಕ್ಕಾಗಿ ಎಲ್ಲರನ್ನು ಹೊರಹಾಕಿದ್ದಾರೆ. ಗೋಕಾಕದಲ್ಲಿ ಸ್ವಾವಲಂಬಿ ಜೀವನ ಮಾಡಬೇಕಾದರೆ ಕಾಂಗ್ರೆಸ್ ಪಕ್ಷಕ್ಕೆ ಮತನೀಡಬೇಕು ಎಂದರು.
ಅಶೋಕ್ ಪೂಜಾರಿ ಮಾತನಾಡಿ ಈ ಚುನಾವಣೆ ರಾಜ್ಯದ ಮತ್ತು ಗೋಕಾಕ ಮತಕ್ಷೇತ್ರದ ಮಹತ್ವದ ಚುನಾವಣೆಯಾಗಿದೆ. ಸಮಾಜದ ಕಟ್ಟಕಡೆಯ ಜೀವಿಗೆ ಸರಕಾರದ ಸೌಲಭ್ಯ ಕೊಟ್ಟ ಸರಕಾರ ಇದ್ದರೆ ಅದು ಸಿದ್ದರಾಮಯ್ಯ ನವರ ಹಿಂದಿನ ಸರಕಾರ ಅದು ಮತ್ತೆ ಬರಬೇಕು ಎಂದರೆ ನಾವೆಲ್ಲ ಕಾಂಗ್ರೆಸಗೆ ಮತ ನೀಡಬೇಕು ಎಂದು ಮನವಿ ಮಾಡಿದ ಅವರು ಕಾಂಗ್ರೆಸ್ ನ 150 ರ ಗುರಿಗೆ ಗೋಕಾಕದ ಕ್ಷೇತ್ರವನ್ನು ಸಹ ಗೆಲ್ಲಿಸಿ ಬದಲಾವಣೆ ಮಾಡಬೇಕು ಎಂದು ಮನವಿ ಮಾಡಿದರು.
ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ಮಾತನಾಡಿ ಬದಲಾವಣೆಗಾಗಿ ನನಗೆ ಮತವನ್ನು ನೀಡಿ ಈ ಬಾರಿ ತಮ್ಮ ಸೇವೆ ಮಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ ರಾಠೋಡ , ಪಕ್ಷದ ಅಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಅನೇಕ ಗಣ್ಯರು ಉಪಸ್ಥಿತರಿದ್ದರು.