RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ದೇಶಿಯ ಸಂಗೀತ ,ಸಾಹಿತ್ಯ ಜನಪದ ಕಲೆಗಳನ್ನು ಉಳಿಸಿ , ಬೆಳೆಸುವಂತ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಶಾಸಕ ಸತೀಶ ಜಾರಕಿಹೊಳಿ

ಗೋಕಾಕ:ದೇಶಿಯ ಸಂಗೀತ ,ಸಾಹಿತ್ಯ ಜನಪದ ಕಲೆಗಳನ್ನು ಉಳಿಸಿ , ಬೆಳೆಸುವಂತ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಶಾಸಕ ಸತೀಶ ಜಾರಕಿಹೊಳಿ 

ದೇಶಿಯ ಸಂಗೀತ ,ಸಾಹಿತ್ಯ ಜನಪದ ಕಲೆಗಳನ್ನು ಉಳಿಸಿ , ಬೆಳೆಸುವಂತ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಶಾಸಕ ಸತೀಶ ಜಾರಕಿಹೊಳಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 21 :

ದೇಶಿಯ ಸಂಗೀತ ,ಸಾಹಿತ್ಯ ಜನಪದ ಕಲೆಗಳನ್ನು ಉಳಿಸಿ , ಬೆಳೆಸುವಂತ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.

ರವಿವಾರದಂದು ನಗರದ ಕೆಎಲ್ಇ ಶಾಲಾ ಸಭಾಂಗಣದಲ್ಲಿ ಶಾರದಾ ಸಮಗ್ರ ಅಭಿವೃದ್ಧಿ ಸಂಸ್ಥೆ ಹಾಗೂ ಗಾನಯೋಗಿ ಪಂಚಾಕ್ಷರಿ ಗಾನ ಕಲಾ ಪರಿಷತ್ ಇವುಗಳ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಸಂಗೀತೋತ್ಸವ ಹಾಗೂ ಗಾನಯೋಗಿ ಪಂಚಾಕ್ಷರಿ ಹಾಗೂ ಗುರುಪುಟ್ಟರಾಜ ಗವಾಯಿಗಳ ಪುಣ್ಯರಾಧಣೆ ಮತ್ತು ಸಂಗೀತ ಸ್ವರ ಲೇಖನ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ವಿವಿಧ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅತ್ಯಂತ ಪುರಾತನ ಇತಿಹಾಸ ಹೊಂದಿರುವ ಸಂಗೀತ ನಮ್ಮ ಸಂಸ್ಕೃತಿಯ ಒಂದು ಭಾಗವಾಗಿ ಮಹತ್ತರ ಪಾತ್ರ ವಹಿಸುತ್ತದೆ. ನಾವು ಸತೀಶ್ ಶುಗರ್ ಆರ್ವಾಡ್ಸ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಿ ಕಲೆಯನ್ನು ಬೆಳೆಸುವ ಕಾರ್ಯವನ್ನು ಮಾಡುತ್ತಿದ್ದೇವೆ‌ ಸಂಘ, ಸಂಸ್ಥೆಗಳು ಇಂತಹ ಕಾರ್ಯಕ್ಕೆ ಮುಂದಾಗಬೇಕು. ಕಲಾವಿದರಿಗೆ ಸಮಾಜ ನೀಡುವ ಪ್ರಾಶಸ್ತ್ಯ ಅತ್ಯಂತ ಶ್ರೇಷ್ಠವಾಗಿದೆ. ಗ್ರಾಮೀಣ ಭಾಗದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿಬೇಕಾಗಿದೆ. ಅಂತಹ ಕಾರ್ಯ ಮಾಡುತ್ತಿರುವ ಈ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಮಾಜಿ ಅಧ್ಯಕ್ಷೆ ಸವಿತಾ ಅರಮಶೆಟ್ಟಿ ಮಾತನಾಡಿ ವೈಜ್ಞಾನಿಕ ತಳಹದಿಯ ಮೇಲೆ ನಮ್ಮ ಪೂರ್ವಜರು ನೀಡಿದ ಪರಂಪರೆಯನ್ನು ನಾವೆಲ್ಲ ಮುಂದುವರೆಸಿ ಮುಂದಿನ ಪೀಳಿಗೆಗೆ ನೀಡಬೇಕಾಗಿದೆ. ಪಾಶ್ಚಿಮಾತ್ಯ ಸಾಂಸ್ಕೃತಿಕಗೆ ಮಾರು ಹೋಗದೆ ಅರ್ಥಪೂರ್ಣವಾದ ನಮ್ಮ ದೇಶಿಯ ಸಂಸ್ಕೃತಿಯನ್ನು ಪ್ರೋತ್ಸಾಹಿಸುವಂತೆ ಕರೆ ನೀಡಿದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ರಾಜ್ಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಪ್ರೊ.ಜಿ.ಬಿ.ಮಳಗಿ ಮತ್ತು ಭಾಸಿತ್ ಅಲಿ ನಿರೂಪಿಸಿದರು. ಕೀರ್ತಿಕಾ ರಾವಜಿ ಸ್ವಾಗತಿಸಿದರು, ಡಾ.ಮಂಜುನಾಥ್ ದೇವಗಾವಿಮಠ ವಂದಿಸಿದರು.
ವೇದಿಕೆ ಮೇಲೆ ಕೆಎಲ್ಇ ನಿರ್ದೇಶಕ ರಾಜು ಮುನ್ನವಳ್ಳಿ, ನಿವೃತ್ತ ಶಿಕ್ಷಕ ಎಸ್ ಎಸ್.ಗಿರಡಿ, ಸಂಸ್ಥೆಯ ಅಧ್ಯಕ್ಷ ಬಿ.ಸಿ.
ದೇಗಾಂವಿಮಠ, ಗೌರಾವಾಧ್ಯಕ್ಷ ನಿರ್ಮಲಾ ಪಾಟೀಲ, ಪ್ರಧಾನ ಕಾರ್ಯದರ್ಶಿ ಸಂಗೀತಾ ದೇಗಾಂವಿಮಠ , ಸಹ ಕಾರ್ಯದರ್ಶಿ ಎಸ್.ಎಫ್.ಕುಂಬಾರ , ಬಸವರಾಜ ಖಾನಪ್ಪನವರ, ಡಾ.ವಿಶ್ವನಾಥ್ ದೇಗಾಂವಿಮಠ , ಅಕ್ಷಯ ದೇಗಾಂವಿಮಠ ಉಪಸ್ಥಿತರಿದ್ದರು
ಕೊನೆಯಲ್ಲಿ ಕಲಾವಿದ ಬಿ.ಸಿ.ದೇವಗಾವಿಮಠ ಅವರ ಶಿಷ್ಯವೃಂದವರಿಂದ ಸಂಗೀತ ಕಾರ್ಯಕ್ರಮ ಜರುಗಿತು.

Related posts: