ಗೋಕಾಕ:ಜಯ ಕರ್ನಾಟಕ ಸಂಘಟನೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಜಯ ಕರ್ನಾಟಕ ಸಂಘಟನೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 20 :
ಇಲ್ಲಿನ ಜಯ ಕರ್ನಾಟಕ ಸಂಘಟನೆ ತಾಲೂಕು ಘಟಕ ವತಿಯಿಂದ ಪ್ರವಾದಿ ಮೊಹಮ್ಮದ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರದಂದು ನಗರದ ವಾರ್ಡ್ ನಂ 9 ರಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕ ಪೈಲವಾನ, ಡಾ. ಶ್ರೀದೇವಿ ಪೂಜೇರಿ, ಡಾ.ಲೋಕನ್ನವರ, ಎಸ್.ಎಂ.ಅಂಗಡಿ, ಜಯ ಕರ್ನಾಟಕ ಸಂಘಟನೆ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಮಲಿಕಜಾನ ತಲವಾರ, ಗೋಕಾಕ ತಾಲೂಕ ಅಧ್ಯಕ್ಷ ಅಜೀ ಜ ಮೋಕಾಶ, ಹಮೀದ ಗೂಡವಾಲೆ, ಮುನ್ನಾ ಬುಡ್ಡನ್ನವರ, ಬಾಳೇಶ ಪೂಜೇರಿ, ಮುಬಾರಕ ಬಾಳೆಕುಂದ್ರಿ, ಮೋಶಿನ ಪೈಲವಾನ, ದುರ್ಗಪ್ಪ ಬಾಗಲಕೂಟ, ಆಸಿಫ್ ಬಾಳೆಕುಂದ್ರಿ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.