RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಮುಸ್ಲಿಂ ಜನಾಂಗದವರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಆಗ್ರಹ : ರಾಷ್ಟ್ರಪತಿಗಳಿಗೆ ಮನವಿ

ಗೋಕಾಕ:ಮುಸ್ಲಿಂ ಜನಾಂಗದವರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಆಗ್ರಹ : ರಾಷ್ಟ್ರಪತಿಗಳಿಗೆ ಮನವಿ 

ಮುಸ್ಲಿಂ ಜನಾಂಗದವರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ತಡೆಯಲು ಆಗ್ರಹ : ರಾಷ್ಟ್ರಪತಿಗಳಿಗೆ  ಮನವಿ

ಗೋಕಾಕ ಸೆ 15 : ಮಾನ್ಮಾರದ (ಬರ್ಮಾ) ರೋಹಿಂಗ್ಯಾ ಮುಸ್ಲಿಮ ಜನಾಂಗದವರ ಮೇಲೆ ದೌರ್ಜನ್ಯವನ್ನು ವಿಶ್ವ ಸಂಸ್ಥೆ ತಡೆಯಬೇಕು ಹಾಗೂ ನಿರಾಶ್ರಿತರಾಗಿ ಭಾರತಕ್ಕೆ ಬಂದಿರುವ ರೋಹಿಂಗ್ಯಾ ಮುಸ್ಲಿಮರನ್ನು ಅಲ್ಲಿನ ಪರಿಸ್ಥಿತಿ ಸುಧಾರಿಸುವವರೆಗೆ ಹಿಂತಿರುಗಿ ಕಳಿಸಬಾರದೆಂದು ಇಲ್ಲಿಯ ಮುಸ್ಲಿಮ ಸಮಾಜದವರು ತಹಶೀಲದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಶುಕ್ರವಾರದಂದು ಸಂಜೆ ಜಮಾತೆ-ಉಲೇಮಾ ಎ ಹಿಂದ ಗೋಕಾಕ ಘಟಕದ ಆಶ್ರಯದಲ್ಲಿ ಮಿನಿ ವಿಧಾನಸೌಧದ ಮುಂದೆ ಸೇರಿದ ಮುಸ್ಲಿಮ ಸಮಾಜದವರು ತಹಶೀಲದಾರರ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿ ಮಾನ್ಮಾರದಲ್ಲಿ ರೋಹಿಂಗ್ಯಾ ಮುಸ್ಲಿಮ ಸಮಾಜದ ಜನರ ಮಾರಣಹೋಮ ನಡೆಯುತ್ತಿದೆ. ಇದರಿಂದ ಸಾವಿರಾರು ಜನರು ಮನೆ ಮಾರು ಬಿಟ್ಟು ಜೀವ ಉಳಿಸಲು ಓಡಾಡುತ್ತಿದ್ದಾರೆ. ಮಾನ್ಮಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕಟವಾಗಿ ನಡೆಯುತ್ತಿದ್ದು ಅದನ್ನು ತಡೆಯಲು ವಿಶ್ವಸಂಸ್ಥೆ ಮಧ್ಯೆ ಪ್ರವೇಶಿಸಿ ರೋಹಿಂಗ್ಯಾ ಮುಸ್ಲಿಮ ಜನಾಂಗದವರಿಗೆ ರಕ್ಷಣೆ ನೀಡಬೇಕು. ಅಲ್ಲದೆ ಭಾರತಕ್ಕೆ ನಿರಾಶ್ರಿತರಾಗಿ ಬಂದಿರುವ ರೋಹಿಂಗ್ಯಾ ಮುಸ್ಲಿಮ ಸಮಾಜದವರನ್ನು ಅಲ್ಲಿನ ಪರಿಸ್ಥಿತಿ ಸಾಮಾನ್ಯ ಆಗುವವರೆಗೆ ಹಿಂತಿರುಗಿ ಕಳಿಸಬಾರದೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಮೌಲಾನಾ ಬಸೀರುಲ್ ಹಕ್ ಕಾಸ್ಮಿ, ಮೌಲಾನಾ ಅಬ್ದುಲ್ಲಾ ಹಾಗೂ ಮಾಜಿ ನಗರಾಧ್ಯಕ್ಷ ಎಸ್.ಎ.ಕೊತವಾಲ ಮಾತನಾಡಿದರು.

ಮನವಿ ಸ್ವೀಕರಿಸಿದ ತಹಶೀಲದಾರ ಜಿ.ಎಸ್.ಮಳಗಿ ಅವರು ಜಿಲ್ಲಾಧಿಕಾರಿಗಳ ಮುಖಾಂತರ ಸಂಬಂಧಪಟ್ಟವರಿಗೆ ಕಳಿಸುವದಾಗಿ ತಿಳಿಸಿದರು.
ಜಮಾತೆ-ಉಲೇಮಾ ಎ ಹಿಂದ ಅಧ್ಯಕ್ಷ ಹಾಫೀಜ ಮಹಮ್ಮದ ಯುನೂಸ ನದಾಫ, ಅಬೂಬಕರ, ಮುಫ್ತಿ ಇಕಬಾಲ, ಇಸ್ಮಾಯಿಲ ಗೋಕಾಕ, ಇಲಾಹಿ ಖೈರದಿ, ಮಲೀಕ ಪೈಲವಾನ, ನಗರಸಭೆ ಸದಸ್ಯ ಬಾಬು ಶೇಖಬಡೆ, ಮುಸ್ತಾಕ ಖಂಡಾಯತ, ಹಾಫೀಜ ಜಮಶೇದ, ಜಕೀರ ಕುಡಚಿಕರ, ಇಕಬಾಲ ಬಸಾಪೂರಿ, ಶರೀಫ ಮುಧೋಳ, ಅಬ್ದುಲ್‍ಸಮಿ ತೇರದಾಳ, ಅಬ್ದುಲ್ ಅಜೀಜ ನದಾಫ, ಹಾಫೀಜ ಇಬ್ರಾಹೀಮ, ಹಾಜಿ ಅಬ್ದುಲ್‍ಗಣಿ ಮುನ್ನೊಳಿ, ಹಾಜಿ ಸಲೀಮ ಖೈರದಿ, ಜುಬೇರ ತ್ರಾಸಗರ ಸೇರಿದಂತೆ ಅನೇಕರು ಇದ್ದರು.

Related posts: