ಗೋಕಾಕ :ಬೆಳಗಾವಿಯನ್ನು ಕಾಪಾಡಲು ನಾವು ಸಮರ್ಥರಾಗಿದ್ದೇವೆ : ರಾಮಚಂದ್ರ ಕಾಕಡೆ
ಬೆಳಗಾವಿಯನ್ನು ಕಾಪಾಡಲು ನಾವು ಸಮರ್ಥರಾಗಿದ್ದೇವೆ : ರಾಮಚಂದ್ರ ಕಾಕಡೆ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 27 :
ಬೆಳಗಾವಿಯನ್ನು ಕಾಪಾಡಲು ನಾವು ಸಮರ್ಥರಾಗಿದ್ದೇವೆ, ಬೆಂಗಳೂರನ್ನು ಆಕ್ರಮಿಸುತ್ತಿರುವ ತಮಿಳು ಮತ್ತು ತೆಲಗರನ್ನು ನಿಯಂತ್ರಿಸುವ ಕೆಲಸ ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ಮಾಡುವವರು ಮೊದಲು ಮಾಡಲಿ ಎಂದು ಮರಾಠಾ ಸಮಾಜದ ಮುಖಂಡ ರಾಮಚಂದ್ರ ಕಾಕಡೆ ಹೇಳಿದರು
ಶುಕ್ರವಾರದಂದು ನಗರ ತಹಶೀಲ್ದಾರ ಕಛೇರಿಯಲ್ಲಿ ಮರಾಠಾ ಸಮಾಜದ ವತಿಯಿಂದ ತಹಶೀಲ್ದಾರ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಅಭಿನಂದನಾ ಪತ್ರ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
ಮರಾಠಾ ಸಮಾಜದವರು ಸ್ವಾಭಿಮಾನಿ ಕನ್ನಡಿಗರಾಗಿದ್ದು, ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಶಿಕ್ಷಣ ಕೊಡಿಸಿರುವ ಪರಿಣಾಮ ಕರ್ನಾಟಕದಲ್ಲಿ ಇಃದು ಮರಾಠಿ ಶಾಲೆಗಳು ಮುಚ್ಚುತ್ತಿವೆ. ಸಿ.ಎಂ ಯಡಿಯೂರಪ್ಪ ಅವರ ಸರಕಾರ ಮರಾಠಾ ಸಮಾಜದ ಅಭಿವೃದ್ಧಿಗೆ ಪ್ರಾಧಿಕಾರ ಸ್ಥಾಪಿಸಿ ಹಿಂದುಳಿದ ಸಮಾಜವನ್ನು ಮೇಲೆತ್ತುವ ಉದ್ದೇಶದಿಂದ 50 ಕೋಟಿ ರೂ ಬಿಡುಗಡೆ ಮಾಡಿರುವುದು ಅಭಿನಂದನೀಯ ಕಾರ್ಯವಾಗಿದ್ದು, ಎಲ್ಲ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುವುದನ್ನು ಬಿಟ್ಟು ಸಮಾಜದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರಲ್ಲದೆ ಇಂದು ಈ ನೆಲದಲ್ಲಿ 80 ಲಕ್ಷಕೂ ಅಧಿಕ ಮರಾಠಾ ಸಮುದಾಯವು ಕನ್ನಡಿಗರಾಗಿ ಹೆಮ್ಮೆಯಿಂದ ಬದುಕುತ್ತಿದ್ದಾರೆ ಎಂದರು
ಸಮಾಜದ ಮುಖಂಡರುಗಳಾದ ಡಾ|| ಸೂರ್ಯವಂಶಿ,ಸುಭಾಸ ಘೋರ್ಪಡೆ,ಮಾತನಾಡಿ ಮುಖ್ಯಮಂತ್ರಿಗಳ ಈ ನಿರ್ಧಾರವು ಕರ್ನಾಟಕದ ಸ್ವಾಭಿಮಾನಿ ಮರಾಠಾ ಸಮಾಜಕ್ಕೆ ಬಲ ತಂದಂತಾಗಿದೆ ಅಲ್ಲದೆ ಸಮಾಜವು ಸ್ವಾಭಿಮಾನದಿಂದ ಬದುಕಲು ಶಕ್ತಿ ನೀಡಿದಂತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ದಶರಥ ಗುಡ್ಡದಮನಿ,ಪರಶುರಾಮ ಭಗತ್,ಜೋತಿಬಾ ಸುಭಂಜಿ,ಪ್ರಕಾಶ ಮುರಾರಿ,ಸಚಿನ ಜಾಧವ,ಜಿತೇಂದ್ರ ಮಾಂಗಳೆಕರ ,ಕೃಷ್ಣಾ ಗುಡ್ಡದಮನಿ ರವಿ ಗುಡ್ಡದಮನಿ, ರಾಜು ಪವಾರ,ಯಮನಪ್ಪ ಬಾಗಾಯಿ, ಮಾರುತಿ ಜಾಧವ,ಸದಾನಂದ ಗಾಯಕವಾಡ ಸೇರಿದಂತೆ ಅನೇಕರು ಇದ್ದರು