ನೇಗಿನಹಾಳ:ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನೇಗಿನಹಾಳ ಗ್ರಾಮದ ಪಂಚಾಯತ್ ಆಡಳಿತ ಅಧಿಕಾರಿ ಡಾ. ಗುರುನಾಥ ಹೂಗಾರ ಅವರಿಗೆ ಸತ್ಕಾರ
ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನೇಗಿನಹಾಳ ಗ್ರಾಮದ ಪಂಚಾಯತ್ ಆಡಳಿತ ಅಧಿಕಾರಿ ಡಾ. ಗುರುನಾಥ ಹೂಗಾರ ಅವರಿಗೆ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ, ನೇಗಿನಹಾಳ ಜು 15 :
ಮಕ್ಕಳು ಕುಟುಂಬದ ಹಾಗೂ ಭವ್ಯ ಭಾರತದ ಸಂಪನ್ಮೂಲ, ಈ ಸಮಾಜದಲ್ಲಿ ಉತ್ತಮ ಸಂಸ್ಕಾರ, ಶ್ರದ್ಧೆ, ಉನ್ನತ ಮಟ್ಟದ ವಿಚಾರಗಳ ಮೇಲೆ ಬೆಳಕು ಚಲ್ಲಬೇಕಾದರೆ ಶಿಕ್ಷಣ ಕ್ಷೇತ್ರ ಬಹುಮುಖ್ಯ ಪಾತ್ರವಹಿಸುತ್ತದೆ. ಅಂತಹ ಕಾರ್ಯವನ್ನು ಶಿಕ್ಷಕರನ್ನು ಶೈಕ್ಷಣಿಕ ಪ್ರಗತಿಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ. ಇದು ನನ್ನ ಮೊದಲ ಆದ್ಯ ಕರ್ತವ್ಯವಾಗಿದೆ ಎಂದು ಬೈಲಹೊಂಗಲ ನೂತನ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನೇಗಿನಹಾಳ ಗ್ರಾಮದ ಪಂಚಾಯತ್ ಆಡಳಿತ ಅಧಿಕಾರಿ ಡಾ. ಗುರುನಾಥ ಹೂಗಾರ ಹೇಳಿದರು.
ನೇಗಿನಹಾಳ ಹಾಗೂ ಹೊಳಿಹೊಸುರ ಗ್ರಾಮ ಪಂಚಾಯತಿಯ ಆಡಳಿತ ಅಧಿಕಾರಿಯಾಗಿ ಸೇವೆ ಆರಂಭಿಸಲು ಆಗಮಿಸಿ ನೇಗಿನಹಾಳ ಗ್ರಾಮದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿ ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ನಮ್ಮೂರಿನ ಆಡಳಿತ ಅಧಿಕಾರಿ ಆಗಿರುವುದು ನಮ್ಮ ಗ್ರಾಮದ ಶೈಕ್ಷಣಿಕ ವ್ಯವಸ್ಥೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅನೂಕೂಲವಾಗಲಿ ಎಂದರು. ಸಂಪಗಾವಿ ಜಿಲ್ಲಾ ಪಂಚಾಯತ್ ಸದಸ್ಯೆ ರೋಹಿಣಿ ಪಾಟೀಲ, ಡಿ.ಪಿ.ಇ.ಪಿ ಶಾಲೆಯ ಮುಖ್ಯ ಅಧ್ಯಾಪಕ ಎಸ್.ವಿ ಗಂಟಿ ಮಾತನಾಡಿದರು.
ಬೈಲಹೊಂಗಲ ಕ್ಷೇತ್ರ ಸಮನ್ವಯಧಿಕಾರಿ ಬಿ.ಎನ್. ಕಸಾಳೆ, ಶಿಕ್ಷಣ ಸಂಯೋಜಕ ಡಿ.ಎಫ್ ಬನ್ನೂರ, ಸಿ.ಆರ್.ಪಿ ಆಯ್ ಬಿ ಹಿರೇಮಠ, ಹೊಳಿಹೊಸುರ ಮಾದರಿ ಶಾಲೆ ಮುಖ್ಯಾಧ್ಯಾಪಕ ಎಸ್.ಎನ್ ಪಾಟೀಲ, ಮಾದರಿ ಶಾಲೆ ಮುಖ್ಯ ಅಧ್ಯಾಪಕ ಎಸ್.ಜಿ ಶಿಗೇಹಳ್ಳಿ, ಶಿಕ್ಷಕರಾದ ರಾಮಣ್ಣಾ ತೋರಣಗಟ್ಟಿ, ಎ.ಎಚ್ ಗುಂಡೆಣ್ಣವರ, ವಿನಾಯಕ ಮಿರಜಕರ, ಎ.ಬಿ ಚೌರಿ, ವಿನಾಯಕ ಜುಂಜರಿ, ಸಮಾಜ ಸೇವಕ ಕೃಷ್ಣಾಜಿ ಕುಲಕರ್ಣಿ ಮತ್ತಿತ್ತರರು ಉಪಸ್ಥಿತರಿದ್ದರು. ಅನ್ವರ ದೇವರದವರ ಸ್ವಾಗತಿಸಿ ನಿರೂಪಿಸಿದರು.