RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಗ್ರಾಮೀಣ ಪ್ರದೇಶ ಅಭಿವೃದ್ಧಿಹೊಂದ ಬೇಕಾದರೆ ಪಂಚಾಯತ ರಾಜ್ಯ ಇಲಾಖೆ ಪ್ರಮುಖ ಕಾರಣವಾಗಿದೆ

ಗೋಕಾಕ:ಗ್ರಾಮೀಣ ಪ್ರದೇಶ ಅಭಿವೃದ್ಧಿಹೊಂದ ಬೇಕಾದರೆ ಪಂಚಾಯತ ರಾಜ್ಯ ಇಲಾಖೆ ಪ್ರಮುಖ ಕಾರಣವಾಗಿದೆ 

ಗ್ರಾಮೀಣ ಪ್ರದೇಶ ಅಭಿವೃದ್ಧಿಹೊಂದ ಬೇಕಾದರೆ ಪಂಚಾಯತ ರಾಜ್ಯ ಇಲಾಖೆ ಪ್ರಮುಖ ಕಾರಣವಾಗಿದೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಡಿ 27 :

 

ರಾಜ್ಯದಲ್ಲಿ ಗ್ರಾಮೀಣ ಪ್ರದೇಶ ಅಭಿವೃದ್ಧಿಹೊಂದ ಬೇಕಾದರೆ ಪಂಚಾಯತ ರಾಜ್ಯ ಇಲಾಖೆ ಪ್ರಮುಖ ಕಾರಣವಾಗಿದೆ. ಸರಕಾರದ ಪ್ರತಿಯೊಂದು ಕಾರ್ಯ ಯೋಜನೆಗಳು ಯಶಸ್ವಿಯಾಗಲು ಗ್ರಾಮೀಣ ಮಟ್ಟದಲ್ಲಿ ಮಾತ್ರ ಸಾಧ್ಯ ಎಂದು ಪಂಚಾಯತ ರಾಜ್ಯ ಇಲಾಖೆಯ ನೌಕರರು ಮನವಿಯಲ್ಲಿ ತಿಳಿಸಿದ್ದಾರೆ.
ಅವರು ಶುಕ್ರವಾರ ತಮಗಾದ ಸಮಸ್ಯೆಯ ಕುರಿತು ಪಂಚಾಯತ ರಾಜ್ಯ ಅಧಿಕಾರಿಗಳ ಮತ್ತು ನೌಕರರ ಸಂಘದಿಂದ ಸರಕಾರಕ್ಕೆ ಮನವಿ ಮೂಲಕ ತಿಳಿಸಿ ಸಮಸ್ಯೆ ಪರಿಹರಿಸಲು ವಿನಂತಿಸಿದ್ದಾರೆ. ಕಾರ್ಯ ನಿರ್ವಾಹಕ ಹುದ್ದೆಯು ಗ್ರುಫ್ ಎ ತತ್ಸಮಾನದು, ಆಡಳಿತಾತ್ಮಕವಾಗಿ ಪ್ರಮುಖ ಹುದ್ದೆಯಾಗಿದೆ. ಅನುಭವ ಹಾಗೂ ಸಾರ್ವಜನಿಕ ಹಿತಾಶಕ್ತಿಯುಳ್ಳ ಹುದ್ದೆಯಾಗಿದೆ. ಅನ್ಯ ಇಲಾಖೆಯವರನ್ನ ನಿಯಮಿಸುವದರಿಂದ ಇಲಾಖೆಯ ಮೂಲ ಕಾರ್ಯಗಳನ್ನು ಮಾಡಲು ಸಾಧ್ಯವಿಲ್ಲ. ಆಡಳಿತಾತ್ಮಕವಾಗಿ ಜವಾಬ್ದಾರಿಯುತ ಕಾರ್ಯ ನೀರ್ವಹಿಲು ಸಾದ್ಯವಾಗುವದಿಲ್ಲಾ. ಪಂಚಾಯತ ರಾಜ್ಯ ಇಲಾಖೆಯ ಕಾಮಗಾರಿಗಳು ಯಶಸ್ವಿಯಾಗಲು ಮೂಲ ಇಲಾಖೆಯವರಿಗೆ ಆದ್ಯತೆ ನೀಡಿದಾಗ ಮಾತ್ರ ಸಾಧ್ಯವೆಂದು ಮುಖ್ಯಮಂತ್ರಿಗಳಿಗೆ ತಾಪಂ ಇಒ ಮೂಲಕ ಮನವಿ ಅರ್ಪಿಸಿದ್ದಾರೆ.
ಪಂಚಾಯತ ಅಭಿವೃದ್ಧಿ ಅಧಿಕಾರಿ ರಂಗಪ್ಪ ಗುಜನಟ್ಟಿ ಮಾತನಾಡಿ, ಇತ್ತಿಚಿನ ಗೋಕಾಕ ತಾಪಂ ಇಒ ಬಸವರಾಜ ಹೆಗ್ಗನಾಯಕರಿಂದ ಪ್ರೇರಣೆಹೊಂದಿ ಸಾಕಷ್ಟು ಯೋಜನೆಗಳನ್ನು ಗ್ರಾಮೀಣ ಮಟ್ಟದಲ್ಲಿ ಯಶಸ್ವಿಯಾಗಿ ರೂಪಿಸಲು ಸಾಧ್ಯವಾಗಿದೆ. ಅವರ ಕ್ರೀಯಾಶೀಲತೆ ದಕ್ಷತೆಯಿಂದಾಗಿ ನಮಗೂ ಇಲಾಖೆಯ ಪರವಾಗಿ ಶ್ರಮಿಸುವ ಬಗ್ಗೆ ಕಾಳಜಿ ಇದೆ. ಸರಕಾರವು ಇನ್ನಾದರು ಇಲಾಖೆಯ ಆಗು ಹೋಗುಗಳ ಬಗ್ಗೆ ವಿಚಾರ ಇಟ್ಟುಕೊಂಡು ಗ್ರಾಮೀಣ ಜನತೆಗೆ ಸಾಮಾನ್ಯ ಸಾರ್ವಜನಿಕ ಸೇವೆ ನೀಡುವ ದೃಷ್ಠಿಯಲ್ಲಿ ಅನ್ಯ ಇಲಾಖೆಯವರಿಗೆ ನೀಡಬಾರದೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗೋಕಾಕ ಇಒ ಬಸವರಾಜ ಹೆಗ್ಗನಾಯಕ ಇವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು. ಗೋಕಾಕ ಮೂಡಲಗಿ ತಾಲೂಕಿನ ಪಂಚಾಯತ ರಾಜ್ಯ ಇಲಾಖೆಯ ನೌಕರರು ಉಪಸ್ಥಿತರಿದ್ದರು.

Related posts: