RNI NO. KARKAN/2006/27779|Sunday, June 15, 2025
You are here: Home » breaking news » ಗೋಕಾಕ:ಹನಿಟ್ರ್ಯಾಪ ಮೂಲಕ ಸುಲಿಗೆ ಮಾಡುತ್ತಿದ್ದ ಓರ್ವ ಮಹಿಳೆ ಸಮೇತ ಆರು ಜನರ ಬಂಧನ

ಗೋಕಾಕ:ಹನಿಟ್ರ್ಯಾಪ ಮೂಲಕ ಸುಲಿಗೆ ಮಾಡುತ್ತಿದ್ದ ಓರ್ವ ಮಹಿಳೆ ಸಮೇತ ಆರು ಜನರ ಬಂಧನ 

ಹನಿಟ್ರ್ಯಾಪ ಮೂಲಕ ಸುಲಿಗೆ ಮಾಡುತ್ತಿದ್ದ  ಓರ್ವ ಮಹಿಳೆ ಸಮೇತ ಆರು ಜನರ ಬಂಧನ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ನ 2 :

 

 

ನಗರದಲ್ಲಿ ಹನಿಟ್ರ್ಯಾಪ ಮೂಲಕ ಸುಲಿಗೆ ಮಾಡುತ್ತಿದ್ದ  ಓರ್ವ ಮಹಿಳೆ ಸಮೇತ ಆರು ಜನರನ್ನು  ಪೋಲೀಸರು ಬಂಧಿಸಿದ ಘಟನೆ ನಗರದಲ್ಲಿ ಜರುಗಿದೆ.

ಶಿಂಗಳಾಪೂರ ಗ್ರಾಮದ ಮಹಿಳೆ ಲಕ್ಷ್ಮೀ ಉರ್ಪ ಸರಸ್ವತಿ ಚಿಗಡೋಳಿ, ಗಂಗಪ್ಪ ಹರಿಜನ,
ನಗರದ ನಿವಾಸಿಗಳಾದ ರಮೇಶ ಮಾವರಕರ, ಮಹೇಶ್ ಉರ್ಪ ಕುಮಾರ್ ಬೆಳಗಾಂವಕರ ಉರ್ಪ ಮೇದಾರ ಹಾಗೂ ಬೆಣಚಿನಮರಡಿ ಗ್ರಾಮದ ಶ್ರೀಕಾಂತ ಗಡಾದ, ಬಸವರಾಜ ಗುಂಡಿ,  ಲಕ್ಷ್ಮಣ ಕಬ್ಬೂರ ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.

ಬಾಗೇವಾಡಿ ಗ್ರಾಮದ ಓರ್ವನಿಗೆ ಎಲ್ಲರೂ ಸೇರಿ ಮಹಿಳೆ ಮೂಲಕ ಮಿಸ್‌ಕಾಲ್‌ ನೀಡಿ ಫೋನ್ ಕರೆ ಮಾಡಿ ಪರಿಚಯ ಮಾಡಿಕೊಂಡು ಮಹಿಳೆಯು ನಂತರ ಹಾಗೆ ಸುಮಾರು ದಿನಗಳ ವರೆಗೆ ಫೋನ್ ಕರೆ ಮಾಡಿ ಮಾತನಾಡುತ್ತಿದ್ದು ದಿ.29ರಂದು ಮನೆಯಲ್ಲಿ ಯಾರು ಇರುವುದಿಲ್ಲ ಅಂತ ಹೇಳಿ ಯುವಕನಿಗೆ ಕರೆ ಮಾಡಿ ಮನೆಗೆ ಆಹ್ವಾನಿಸಿದ್ದಾಳೆ. ಮಹಿಳೆ ಮನೆಗೆ ಯುವಕ ಬಂದಾಗ ಬಾಗಿಲು ಹಾಕಿಕೊಂಡು ಮಾತನಾಡುತ್ತಾ ಕುಳಿತಿರುವಾಗ ತಂಡದ ಇತರೆ ಯುವಕರು ಮನೆ ಮೇಲೆ ದಾಳಿ ಮಾಡಿ ನಂತರ ನಮ್ಮ ಅಕ್ಕನ ಮನೆಯಲ್ಲಿ ಏನು ಮಾಡುತ್ತಿದ್ದಿಯಾ ಅಂತ ಯುವಕನನ್ನು ಬೈದು ಥಳಿಸಿದ್ದಾರೆ. ನಂತರ ಬಲವಂತವಾಗಿ ಯುವಕನ ಮತ್ತು ಮಹಿಳೆಯ ಬಟ್ಟೆ ಬಿಚ್ಚಿಸಿ ಮೊಬೈಲ್ ನಲ್ಲಿ ಚಿತ್ರಿಸಿದ್ದಾರೆ. ಯುವಕ ಕ್ಷಮಿಸುವಂತೆ ಕೇಳಿದಾಗ ಗುಂಪಿನ ಯುವಕರು 3 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಾಗ ಇದಕ್ಕೆ ಒಪ್ಪಂದ ಯುವಕನನ್ನು ಥಳಿಸಿ ಮೈಮೇಲೆ ಇರುವ ಬಂಗಾರದ ಚೈನ್  ಮತ್ತು1ಸಾವಿರ ರೂಪಾಯಿ ಕಸಿದುಕೊಂಡು, 3 ಲಕ್ಷ ಹಣ ನೀಡದಿದ್ದರೆ ವಿಡಿಯೋ ಹರಿಬಿಡುತ್ತೆವೆ ಎಂದು ಹೆದರಿಸಿದ್ದಾಗ ಯುವಕ ಸ್ವಲ್ಪ ದಿನ ಕಾಲಾವಕಾಶ ನೀಡುವಂತೆ ಕೇಳಿಕೊಂಡಿದ್ದಾನೆ. ನಂತರ ಗ್ರಾಮಕ್ಕೆ ತೆರೆಳಿದ ಯುವಕ ಸ್ನೇಹಿತರೊಂದಿಗೆ ಈ ವಿಷಯ ಚರ್ಚಿಸಿ  ದಿ.01ರಂದು  ಈ ಬಗ್ಗೆ ದೂರು ನೀಡಿದ್ದಾನೆ.

ದೂರು ಸ್ವೀಕರಿಸಿದ ಪೋಲೀಸರು ಕೂಡಲೇ ಕಾರ್ಯ ಪ್ರವೃತ್ತರಾಗಿ ಸಿಪಿಐ ಶ್ರೀಧರ ಸಾತಾರೆ ಮಾರ್ಗದರ್ಶನದಲ್ಲಿ  ನಗರ ಠಾಣೆ ಪಿಎಸ್‌ಐ ಗುರುನಾಥ್ ಚವ್ಹಾಣ, ಸಿಬ್ಬಂದಿ
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Related posts: