ಬೆಳಗಾವಿ:ತಪ್ಪಿತಸ್ಥರ ವಿರುದ್ಧ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿ : ರಾಜೀವ ಟೋಪಣ್ಣವರ
ತಪ್ಪಿತಸ್ಥರ ವಿರುದ್ಧ ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿ : ರಾಜೀವ ಟೋಪಣ್ಣವರ
ಬೆಳಗಾವಿ ಡಿ 3 : ಈದ್ ಮಿಲಾದ್ ಆಚರಣೆ ವೇಳೆ ಪಾಕ್ ಸೇನೆ ಬಳಸುವ ಹಾಡೊಂದನ್ನು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ
ನಗರದಲ್ಲಿ ಶನಿವಾರ ಈದ್ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆಯಲ್ಲಿ ಪಾಕ್ ಸೇನೆಯ ಹಾಡು ಬಳಸಲಾಗಿದೆ. ಈ ಹಾಡಿಗೆ ಪಾಲಿಕೆ ಸದಸ್ಯರು ಸೇರಿದಂತೆ ಹಲವರು ಹೆಜ್ಜೆಹಾಕಿದ್ದಾರೆ ಎಂದು ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜೀವ ಟೋಪಣ್ಣವರ್ ಆರೋಪಿಸಿದ್ದಾರೆ ಹಬ್ಬ ಆಚರಣೆಗೆ ಯಾವುದೇ ವಿರೋಧವಿಲ್ಲ ಆದರೆ, ಪಾಕ್ ಹಾಡು ಬಳಸಿರುವುದೇಕೆ ಎಂದು ಪ್ರಶ್ನಿಸಿರುವ ಅವರು ಪೊಲೀಸ್ ಇಲಾಖೆ ಇನ್ನೂ ಕೂಡ ಕ್ರಮ ಕೈಗೊಂಡಿಲ್ಲ. ಕೂಡಲೇ ತಪ್ಪಿತಸ್ಥರ ವಿರುದ್ಧ
ರಾಷ್ಟ್ರದ್ರೋಹದಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು
ಎಂದು ಟೋಪಣ್ಣವರ ಅವರು ಆಗ್ರಹಿಸಿದ್ದಾರೆ.