RNI NO. KARKAN/2006/27779|Tuesday, January 27, 2026
You are here: Home » breaking news » ಘಟಪ್ರಭಾ:ಡಿಸಿಸಿ ಬ್ಯಾಂಕ ವತಿಯಿಂದ ಸಹಾಯಧನದ ಚೆಕ್‍ ವಿತರಣೆ

ಘಟಪ್ರಭಾ:ಡಿಸಿಸಿ ಬ್ಯಾಂಕ ವತಿಯಿಂದ ಸಹಾಯಧನದ ಚೆಕ್‍ ವಿತರಣೆ 

ಡಿಸಿಸಿ ಬ್ಯಾಂಕ ವತಿಯಿಂದ ಸಹಾಯಧನದ ಚೆಕ್‍ ವಿತರಣೆ

 
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮೇ 30 :

 
ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಇತ್ತೀಚಿಗೆ ವಿದ್ಯುತ ಅಪಘಾತದಲ್ಲಿ ಮೃತರಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾಗಿದ್ದ ಕುತುಬುದ್ದಿನ ಇಮಾಮಸಾಬ ಬಾಗವಾನ ಅವರ ಕುಟುಂಬಕ್ಕೆ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (ಡಿಸಿಸಿ) ಬ್ಯಾಂಕ ಇದರ ಸಂಯುಕ್ತವಾಗಿ ಒಂದು ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಸೋಮವಾರ ವಿತರಿಸಲಾಯಿತು.
ಮೃತರ ವಾರಸ್ಸುದಾರರಾದ ಶ್ರೀಮತಿ ಮಲೀಕಮಾ ಕುತುಬುದ್ದಿನ ಬಾಗವಾನ ಇವರಿಗೆ ಸಹಾಯಧನದ ಚೆಕ್‍ನ್ನು ಸಂಘದ ಅಧ್ಯಕ್ಷರಾದ ಮಂಜುನಾಥ ಬಾಬು ಗುಡಕೇತ್ರ ವಿತರಿಸಿದರು.
ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಡಪ್ಪಾ ಬಂಡಿವಡ್ಡರ, ನಿರ್ದೇಶಕರಾದ ಶ್ರೀಶೈಲ ಮಾನೆಪ್ಪಗೋಳ, ಗಂಗಪ್ಪಾ ಖಂಡುಗೊಳ, ದಿನೇಶ ಕಡೇಲಿ, ಸಿದ್ಧಲಿಂಗ ನೇರ್ಲಿ, ಸಿದ್ಧಪ್ಪಾ ಸತ್ತಿಗೇರಿ, ವಿಠ್ಠಲ ಜೋತೆನ್ನವರ, ಪರಸಪ್ಪಾ ಪಾಟೀಲ, ಕೆಂಪಣ್ಣಾ ದೇವರಮನಿ, ಕಸ್ತೂರಿ ಈರಪ್ಪ ಮಾನೆಪ್ಪಗೋಳ, ಇಂದಿರಾ ಶಿವನಗೌಡ ಕಬ್ಬೂರ, ಬ್ಯಾಂಕ ನಿರೀಕ್ಷಕರಾದ ಸನ್ನಿ ಪಾಟೀಲ, ಮುಖ್ಯ ಕಾರ್ಯನಿರ್ವಾಹಕರಾದ ರಮೇಶ ಪರಕನಟ್ಟಿ ಸೇರಿದಂತೆ ಅನೇಕರು ಇದ್ದರು.  

Related posts: