ಗೋಕಾಕ:ಅರಭಾವಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿ ಉಳಿಸುವಂತೆ ಆಗ್ರಹಿಸಿ ಮನವಿ
ಅರಭಾವಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿ ಉಳಿಸುವಂತೆ ಆಗ್ರಹಿಸಿ ಮನವಿ
ಗೋಕಾಕ ಸೆ 4 : ಅರಭಾವಿ ಪಟ್ಟಣ ಪಂಚಾಯತಿಯನ್ನು ಗೋಕಾಕ ತಾಲೂಕಿನಲ್ಲಿ ಉಳಿಸುವಂತೆ ಆಗ್ರಹಿಸಿ ಪಟ್ಟಣದ ನೂರಾರು ನಾಗರೀಕರು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದರು.
ಶಾಸಕರ ಪರವಾಗಿ ಎನ್ಎಸ್ಎಫ್ ಅತಿಥಿ ಗೃಹದ ನಿಂಗಪ್ಪ ಕುರಬೇಟ ಹಾಗೂ ಲಕ್ಕಪ್ಪ ಲೋಕುರಿ ಅವರು ಮನವಿ ಸ್ವೀಕರಿಸಿ, ಶಾಸಕರ ಗಮನಕ್ಕೆ ತರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಹಿರೇಮಠ, ಶಂಕರ ಬಿಲಕುಂದಿ, ಮುತ್ತೆಪ್ಪ ಜಲ್ಲಿ, ರಾಯಪ್ಪ ಬಂಡಿವಡ್ಡರ, ನಿಂಗಪ್ಪ ಇಳಿಗೇರ, ಸಾತಪ್ಪ ಜೈನ್, ಯಲ್ಲಪ್ಪ ಸತ್ತಿಗೇರಿ, ಸುನೀಲ ಜಮಖಂಡಿ, ರಮೇಶ ಮಾದರ, ಗಣಪತಿ ಇಳಿಗೇರ, ಪಪಂ ಸದಸ್ಯರು ಸೇರಿದಂತೆ ಅರಭಾವಿ ಪಟ್ಟಣ ವ್ಯಾಪ್ತಿಯ ಪ್ರಮುಖರು ಉಪಸ್ಥಿತರಿದ್ದರು.