RNI NO. KARKAN/2006/27779|Friday, August 1, 2025
You are here: Home » breaking news » ಗೋಕಾಕ:ಕರ್ನಾಟಕ ಬಂದ್​​ಗೆ ಗೋಕಾಕದಲ್ಲಿ ಉತ್ತಮ ಪ್ರತಿಕ್ರಿಯೆ; ರೈತ ಮುಖಂಡರಿಂದ ರಸ್ತೆ ತಡೆ ನಡೆಯಿಸಿ ಪ್ರತಿಭಟನೆ

ಗೋಕಾಕ:ಕರ್ನಾಟಕ ಬಂದ್​​ಗೆ ಗೋಕಾಕದಲ್ಲಿ ಉತ್ತಮ ಪ್ರತಿಕ್ರಿಯೆ; ರೈತ ಮುಖಂಡರಿಂದ ರಸ್ತೆ ತಡೆ ನಡೆಯಿಸಿ ಪ್ರತಿಭಟನೆ 

ಕರ್ನಾಟಕ ಬಂದ್​​ಗೆ ಗೋಕಾಕದಲ್ಲಿ  ಉತ್ತಮ ಪ್ರತಿಕ್ರಿಯೆ; ರೈತ ಮುಖಂಡರಿಂದ ರಸ್ತೆ ತಡೆ ನಡೆಯಿಸಿ ಪ್ರತಿಭಟನೆ

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 28 :

ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರೋಧಿಸಿ, ಕರಾಳ ಸುಗ್ರೀವಾಜ್ಞೆ ವಾಪಸ್ ಪಡೆಯಲು ಒತ್ತಾಯಿಸಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಗೋಕಾಕದಲ್ಲಿ  ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಸ್ ಸಂಚಾರ ಎಂದಿನಂತೆ ಇದ್ದರು ಸಹ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ , ಆಟೋ ಮತ್ತು ಇತರೆ ವಾಹನ ಸಂಚಾರ ವಿರಳವಾಗಿದೆ.  ಅಲ್ಲಲಿ  ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿವೆ.

ನಗದರ ನಾಕಾ ನಂ 1 ರಲ್ಲಿ ರೈತ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ರೈತ ಮುಖಂಡ ಭೀಮಶಿ ಗದಾಡಿ , ಗಣಪತಿ ಈಳಿಗೇರ  ನೇತೃತ್ವದಲ್ಲಿ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆ ಮಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ, ಜಯ ಕರ್ನಾಟಕ , ಕರ್ನಾಟಕ ರಕ್ಷಣಾ ವೇದಿಕೆ ಸಂತೋಷ ಅರಳಿಕಟ್ಟಿ ಬಣ, ಕರ್ನಾಟಕ ಯುವ ಸೇನೆ , ದಲಿತಪರ ಸಂಘಟನೆಗಳು ಬಂದ್ ಗೆ ಬೆಂಬಲ ವ್ಯಕ್ತಪಡಿಸಿವೆ .

Related posts: