ಗೋಕಾಕ:ಸ್ವತಂತ್ರ ಎಂದರೆ ದೇಶದ ಅಸ್ಮಿತೆ , ದೇಶದ ಸ್ವಾಭಿಮಾನ : ಬಿ.ಆರ್ ಮುರಗೋಡ
ಸ್ವತಂತ್ರ ಎಂದರೆ ದೇಶದ ಅಸ್ಮಿತೆ , ದೇಶದ ಸ್ವಾಭಿಮಾನ : ಬಿ.ಆರ್ ಮುರಗೋಡ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :
ಸ್ಥಳೀಯ ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆಯಲ್ಲಿ ಶನಿವಾರದಂದು 74ನೇ ಸ್ವಾತಂತ್ರೋತ್ಸವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯ ಬಿ.ಆರ್.ಮುರಗೋಡ ಸ್ವತಂತ್ರ ಎಂದರೆ ದೇಶದ ಅಸ್ಮಿತೆ , ದೇಶದ ಸ್ವಾಭಿಮಾನ ಅನೇಕ ಮಹನೀಯರು ತಮ್ಮ ಬದುಕನ್ನು ಪಣಕ್ಕಿಟ್ಟು ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟಿದ್ದಾರೆ ಅಂತಹ ಮಹಾನ ವ್ಯಕ್ತಿಗಳ ಆರ್ದಶಗಳನ್ನು ಪಾಲಿಸಿ, ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಹೇಳಿದರು
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ನೂರೆಇಲಾಹಿ ಜಮಾದರ, ಸದಸ್ಯರುಗಳಾದ ಸಾದಿಕ ಹಲ್ಯಾಳ , ಅಬ್ಬು ಮುಜಾವರ , ಶಿಕ್ಷಕಿಯರಾದ ಶ್ರೀಮತಿ ಸಲ್ಲಾಂ ಮುಲ್ಲಾ , ಎಫ್.ಎ ಚಿಕ್ಕುಂಬಿ ಐ.ಎಂ ಮೋಮಿನ ಉಪಸ್ಥಿತರಿದ್ದರು