ಗೋಕಾಕ:ಜಲಪ್ರಳಯದಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಜೆಸಿಬಿ ಹಾಗೂ ಟ್ಯಾಕ್ಟರ್ಗಳನ್ನು ನೀಡಿದ ಸಹಾಯ

ಜಲಪ್ರಳಯದಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಜೆಸಿಬಿ ಹಾಗೂ ಟ್ಯಾಕ್ಟರ್ಗಳನ್ನು ನೀಡಿದ ಸಹಾಯ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಅ 14 :
ದಿವಂಗತ ದೀಪಾ ನಾಯ್ಕ ಸೇವಾ ಸಮಿತಿ ಗೋಕಾಕ ಹಾಗೂ ಮುಂಬೈನ ಎಚ್.ಎಮ್.ನಾಯ್ಕ ಹಾಗೂ ಗೆಳೆಯರ ಬಳಗದವರು ನಗರದಲ್ಲಿ ಜಲಪ್ರಳಯದಿಂದಾಗಿ ಹಾನಿಗೊಳಗಾದ ಪ್ರದೇಶಗಳಲ್ಲಿ ಸ್ವಚ್ಛತೆಗಾಗಿ ಜೆಸಿಬಿ ಹಾಗೂ ಟ್ಯಾಕ್ಟರ್ಗಳನ್ನು ನೀಡಿದ್ದು ಅವುಗಳಿಗೆ ಬುಧವಾರದಂದು ನಗರದ ಕುರುಬರ ಪೂಲ್ ಹತ್ತಿರ ಪೂಜೆಯನ್ನು ಸಲ್ಲಿಸಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಕಳುಹಿಸಲಾಯಿತು.
ಈ ಸಂದರ್ಭದಲ್ಲಿ ಸಮಿತಿಯ ಕಿಶೋರ ಭಟ್ಟ, ಸುನೀಲ ಮುರ್ಕಿಭಾಂವಿ, ರಾಜು ಜಾಧವ, ಮುಸ್ತಕ ಬಂಡಾಯತ್, ರಫೀಕ ಮೋಮಿನ, ಪ್ರಕಾಶ ಬಾಗಲೆ, ಮಹೇಶ ಗಣಾಚಾರಿ, ಎಸ್.ವಿ.ದೇಮಶೆಟ್ಟಿ, ಸಂಜು ಚಿಪ್ಪಲಕಟ್ಟಿ, ನಗರ ಸಭೆ ಸದಸ್ಯ ಎಸ್,ಎ,ಕೋತವಾಲ, ಅಬ್ಬಾಸ ದೇಸಾಯಿ, ಗಿರೀಶ ಖೋತ, ಪೌರಾಯುಕ್ತ ಶಿವಾನಂದ ಹಿರೇಮಠ ಪರಿಸರ ಅಭಿಯಂತರ ಎಮ್.ಎಚ್,ಗಜಾಕೋಶ ಸೇರಿದಂತೆ ಅನೇಕರು ಇದ್ದರು.
ಇದೇ ಸಂದರ್ಭದಲ್ಲಿ ಹುಬ್ಬಳಿ ಧಾರವಾಡದ ಆಜಣ (ಪಟೇಲ) ಸಮಾಜ ಸಂಘಟನೆಯಿಂದ ಜೀವನವಶ್ಯಕ ಸಾಮಾಗ್ರಿಗಳನ್ನು ಸಂತ್ರಸ್ತರಿಗೆ ವಿತರಿಸಲಾಯಿತು.