ಗೋಕಾಕ:ಸಮುದಾಯ ಭವನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಯುವ ಮುಖಂಡ ಲಖನ್ ಜಾರಕಿಹೊಳಿ
ಸಮುದಾಯ ಭವನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಯುವ ಮುಖಂಡ ಲಖನ್ ಜಾರಕಿಹೊಳಿ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಮಾ 8 :
ಮುಂದಿನ ವರ್ಷ (2020) ಬರುವ ಗ್ರಾಮದೇವತೆಯರ ಜಾತ್ರೆ ಅಂಗವಾಗಿ ಶುಕ್ರವಾರದಂದು ಎರಡೂ ದೇವಿಗಳ (ಶ್ರೀ ಲಕ್ಷ್ಮೀದೇವಿ ಹಾಗೂ ಶ್ರೀ ಲಕ್ಕವ್ವ ದೇವಿ) ದೇವಸ್ಥಾನದಲ್ಲಿ ಹೋಮ-ಹವನ, ಪೂಜಾ ಆದಿ ಧಾರ್ಮಿಕ ವಿಧಿ ವಿಧಾನಗಳಿಂದ ಗ್ರಾಮದೇವಿಯರ ಮೂರ್ತಿಗಳಿಗೆ ಕಂತಿ ಮಾಡುವ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಯುವ ಮುಖಂಡ ಲಖನ್ ಜಾರಕಿಹೊಳಿ, ಜಾತ್ರಾ ಕಮೀಟಿ ಸದಸ್ಯರಾದ ಅಶೋಕ ಹೆಗ್ಗಣ್ಣವರ, ಪ್ರಲ್ಹಾದ ಸುಣಧೋಳಿ, ಪ್ರಭಾಕರ ಚವ್ಹಾಣ, ಅಶೋಕ ಪಾಟೀಲ, ರಾಜು ಪವಾರ, ಅಶೋಕ ತುಕ್ಕಾರ, ಬಸವಣ್ಣೆಪ್ಪ ಬನ್ನಿಶೆಟ್ಟಿ, ಸುಬ್ಬಣ್ಣ ಸಂಕಪಾಳ, ರಾಯಪ್ಪ ಭಂಡಾರಿ ಹಾಗೂ ನಗರದ ಅಶೋಕ ಸಾಯನ್ನವರ, ಸದಾನಂದ ಕಲಾಲ ಸೇರಿದಂತೆ ನಗರಸಭೆ ಸದಸ್ಯರು ಇದ್ದರು.
ಸಮುದಾಯ ಭವನ ಕಟ್ಟಡ ಕಾಮಗಾರಿಯನ್ನು ವೀಕ್ಷಿಸಿದ ಯುವ ಮುಖಂಡ : ಶ್ರೀ ಲಕ್ಷ್ಮೀ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಲಕ್ಷ್ಮೀ ಸಮುದಾಯ ಭವನಕ್ಕೆ ಯುವ ಮುಖಂಡ ಲಖನ್ ಜಾರಕಿಹೊಳಿ ಭೇಟಿ ನೀಡಿ ವೀಕ್ಷಣೆ ನಡೆಸಿದರು. ಈ ಸಂದರ್ಭದಲ್ಲಿ ಸಲಹೆ ನೀಡಿದ ಲಖನ್ ಜಾರಕಿಹೊಳಿ ಅವರು ಭವನದ ಕಾರ್ಯ ಒಳ್ಳೇ ರೀತಿಯಿಂದ ನಡೆದಿದ್ದು ಬರುವ ಜಾತ್ರೆಯ ಸಮಯದಲ್ಲಿ ಭವನದ ಕಾರ್ಯ ಪೂರ್ಣಗೊಳ್ಳಬೇಕು ಎಂದು ತಿಳಿಸಿದರು.