ಘಟಪ್ರಭಾ:ಪೌರ ಕಾರ್ಮಿಕರ ಪ್ರತಿಭಟಣೆಗೆ ಮನಿದ ಸರ್ಕಾರ ಬಾಕಿ ಉಳಿದ ವೇತನವನ್ನು ನೀಡುವದಾಗಿ ಜಿಲ್ಲಾಧಿಕಾರಿಗಳು ಭರವಸೆ
ಪೌರ ಕಾರ್ಮಿಕರ ಪ್ರತಿಭಟಣೆಗೆ ಮನಿದ ಸರ್ಕಾರ ಬಾಕಿ ಉಳಿದ ವೇತನವನ್ನು ನೀಡುವದಾಗಿ ಜಿಲ್ಲಾಧಿಕಾರಿಗಳು ಭರವಸೆ
ಘಟಪ್ರಭಾ ಡಿ 31 : ಪೌರ ಕಾರ್ಮಿಕರ ಪ್ರತಿಭಟಣೆಗೆ ಮನಿದ ಸರ್ಕಾರ ಹೊಸದಾಗಿ ಮೇಲ್ದೇರ್ಜೆಗೆರಿಸಿದ 17 ಪಟ್ಟಣ ಪಂಚಾಯತಿಗಳಲ್ಲಿ ಕೆಲಸ ನಿರ್ವಸುತ್ತಿರುವ ಪೌರ ಕಾರ್ಮಿಕರ ಹಿಂದಿನ ಬಾಕಿ ಉಳಿದ ವೇತನವನ್ನು ನೀಡುವದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದಾರೆ.
ಇದರಿಂದ ಕಳೆದ 10 ದಿನಗಳಿಂದ ಮಲ್ಲಾಪೂರ ಪಿ.ಜಿ ಪ.ಪಂ ಕಾರ್ಯಾಲಯದ ಎದುರು ಕ್ಲಾರ್ಕ, ವಸೂಲಿ, ಕ್ಲಾರ್ಕ ಕಂಪ್ಯೂಟರ್, ಅಪರೇಟರ್, ವಾಟರಮನ್, ವಾಯರಮನ್ ಸೇರಿದಂತೆ 30 ಕ್ಕೂ ಹೆಚ್ಚು ಪೌರ ಕಾರ್ಮಿಕರು ಕಳೆದ 14 ತಿಂಗಳ ಬಾಕಿ ವೇತನ ಹಾಗೂ ಸೇವಾ ಭದ್ರತೆಗಾಗಿ ಅನಿರ್ದಿಷ್ಟ ಧರಣಿ ಸತ್ಯಾಗ್ರಹ ನಡೆಸುತ್ತಿದ್ದು, ದಿ.29ರಂದು ಸದರಿ ಸಿಬ್ಬಂದಿಗಳ ಪೈಕಿ 23 ಪೌರ ಕಾರ್ಮಿಕರ ವೇತನ ಪಾವತಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ಅಲ್ಲದೆ ಇನ್ನೂಳಿದ 7 ಜನ ನೌಕರರ ಬಗ್ಗೆ ಮುಂದೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದ್ದರಿಂದ ಕಳೆದು 10 ದಿನಗಳಿಂದ ನಡೆಯುತ್ತಿರುವ ಧರಣಿಯನ್ನು ಮುಕ್ತಾಯಗೊಳಿಸಿದ ಪೌರ ಕಾರ್ಮಿಕರು ತಮ್ಮ ಕೆಲಸಗಳಿಗೆ ತೆರಳಿದ್ದಾರೆ.
ಸರ್ಕಾರ ಪೌರ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿ 23 ಜನ ನೌಕರರ ವೇತನ ಮಂಜೂರ ಮಾಡಿದ್ದು, ಸಂತಸ ತಂದಿದೆ. ಆದರೆ ಮೇಲಾಧಿಕಾರಿಗಳು ಮುಂದಿನ ದಿನಗಳಲ್ಲಿ ಇನ್ನೂಳಿದ 7 ಜನ ನೌಕರರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಮತ್ತೇ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಪೌರ ಕಾರ್ಮಿಕರ ಸಂಘಟನೆಯವರು ಎಚ್ಚರಿಸಿದ್ದಾರೆ.