ಗೋಕಾಕ:ಶಿಕ್ಷಕ ಜೈಪಾಲ್ ಭಜಂತ್ರಿ ಅಮಾನತ್ತಿಗೆ ಕರವೇ ಆಗ್ರಹ
ಶಿಕ್ಷಕ ಜೈಪಾಲ್ ಭಜಂತ್ರಿ ಅಮಾನತ್ತಿಗೆ ಕರವೇ ಆಗ್ರಹ
ಗೋಕಾಕ ಅ 10 : ಮಕ್ಕಳಿಂದ ಶಾಲೆಯ ಶೌಚಾಲಯ ಮತ್ತು ದ್ವಿಚಕ್ರ ವಾಹನ ಕ್ಲೀನ್ ಮಾಡಿಸಿದ ಬಡಿಗವಾಡ ಪ್ರಾಥಮಿಕ ಶಾಲೆಯ ಶಿಕ್ಷಕ ಜೈಪಾಲ ಭಜಂತ್ರಿ ಯನ್ನು ಈ ಕೂಡಲೇ ಅಮಾನತು ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ಆಗ್ರಹಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಕ್ಕಳಿಗೆ ಶಿಕ್ಷಣ , ವಿಧ್ಯೆ ಬುದ್ದಿ ಹೇಳಬೇಕಾದ ಶಿಕ್ಷಕ ವಿದ್ಯಾರ್ಥಿಗಳಿಂದ ಶೌಚಾಲಯ ಸ್ವಚ್ಛ ಗೋಳಿಸಿ ಅಮಾನವೀಯ ಕೃತ್ಯ ವೆಸಗಿದ್ದಾರೆ ಕೂಡಲೇ ಶಿಕ್ಷಣಾಧಿಕಾರಿ ಮತ್ತು ಉಪನಿರ್ದೇಶಕರು ಎಚ್ಚೆತ್ತುಕೊಂಡು ಶಿಕ್ಷಣ ಜೈಪಾಲನನ್ನು ಅಮಾನತು ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಕೈಗೋಳಲಾಗುವದೆಂದು ಖಾನಪ್ಪನವರ ಹೇಳಿದ್ದಾರೆ