ಗೋಕಾಕ:ಬಿಜೆಪಿ ಪಕ್ಷದ ಐತಿಹಾಸಿಕ ಕಾರ್ಯಗಳನ್ನು ಪ್ರತಿಯೊಬ್ಬರ ಮನೆ ಮನೆಗೆ ತಲುಪಿಸಿ : ಸಚಿವ ರಮೇಶ ಕರೆ
ಬಿಜೆಪಿ ಪಕ್ಷದ ಐತಿಹಾಸಿಕ ಕಾರ್ಯಗಳನ್ನು ಪ್ರತಿಯೊಬ್ಬರ ಮನೆ ಮನೆಗೆ ತಲುಪಿಸಿ : ಸಚಿವ ರಮೇಶ ಕರೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 7 :

ಗೋಕಾಕ ನಗರದ ವಿವೇಕಾನಂದ ನಗರದಲ್ಲಿ ಕರ ಪತ್ರ ವಿತರಣಾ ಕಾರ್ಯಕ್ಕೆ ಚಾಲನೆ ನೀಡುತ್ತಿರುವ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ
ಬಿಜೆಪಿ ಪಕ್ಷದ ಐತಿಹಾಸಿಕ ಅಬಿವೃದ್ದಿ ಕಾರ್ಯಗಳನ್ನು ಪ್ರತಿಯೊಬ್ಬರ ಮನೆ ಮನೆಗೆ ತಲುಪಿಸುವ ಕಾರ್ಯ ಪಕ್ಷದ ಕಾರ್ಯಕರ್ತರು ಜವಾಬ್ದಾರಿಯಿಂದ ಮಾಡಬೇಕು ಎಂದು ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ಮೋದಿ ಸರಕಾರ ಒಂದು ವರ್ಷ ಪೂರೈಸಿದ ನಿಮಿತ್ಯ ಬಿಜೆಪಿ ಸರಕಾರದ ಸಾಧನೆಗಳ ಕರ ಪತ್ರ ವಿತರಣಾ ಕಾರ್ಯಕ್ಕೆ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದಲ್ಲಿ ರವಿವಾರದಂದು ಚಾಲನೆ ನೀಡಿ ಅವರು ಮಾತನಾಡಿದರು
ಪ್ರಧಾನ ಮಂತ್ರಿ ಕಿಸಾನ ಸಮ್ಮಾನ ನಿಧಿ, ಜಲಜೀವನ ಮಿಷನ್ , 60 ವರ್ಷ ದಾಟಿದ ರೈತರು, ಕೃಷಿ ಕಾರ್ಮಿಕರು, ಸಣ್ಣ ಅಂಗಡಿ ಮಾಲೀಕರು ಹಾಗೂ ಕಾರ್ಮಿಕರಿಗೆ ಮಾಸಿಕ 3 ಸಾವಿರ ರೂ ಪಿಂಚಣಿ, ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ 400 ಕ್ಕೂ ಅಧಿಕ ಏಕಲವ್ಯ ಮಾದರಿ ವಸತಿ ಶಾಲೆಗಳ ನಿರ್ಮಾಣ ಸೇರಿದಂತೆ ಅನೇಕ ಐತಿಹಾಸಿಕ ಕಾರ್ಯಗಳನ್ನು ಮೋದಿ ಸರಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ ಮಾಡಿದೆ ಈ ಎಲ್ಲ ಕಾರ್ಯಗಳನ್ನು ಮನೆ ಮನೆಗಳಿಗೆ ಮತ್ತು ಜನರ ಮನಮನಗಳಿಗೆ ತಲುಪಿಸುವ ಕಾರ್ಯ ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಮಾಡಬೇಕಾಗಿದೆ ಎಂದು ಸಚಿವರು ಹೇಳಿದರು
ನಂತರ ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರು ಗೋಕಾಕ ನಗರದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ನಗರದ ವಿವೇಕಾನಂದ ನಗರದಲ್ಲಿಯ ಮನೆಮನೆಗಳಲ್ಲಿ ತೆರಳಿ ಮೋದಿ ಸರಕಾರದ ಒಂದು ವರ್ಷದ ಸಾಧನೆಗಳ ಕರ ಪತ್ರಗಳನ್ನು ವಿತರಿಸಿ ಕರಪತ್ರ ವಿತರಣಾ ಕಾರ್ಯಕ್ರಮಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು .
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ,ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ , ನರಗ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ,ಗ್ರಾಮೀಣ ಅಧ್ಯಕ್ಷ ರಾಜುಗೌಡ ಪಾಟೀಲ ,ಜಿ.ಪಂ ಸದಸ್ಯರುಗಳಾದ ಮಲ್ಲಿಕಾರ್ಜುನ ನಾಯಿಕ , ಟಿ.ಆರ್.ಕಾಗಲ , ಮಡೆಪ್ಪ ತೋಳಿನವರ , ಗಣ್ಯರುಗಳಾದ ರಾಜು ತಳವಾರ, , ಭೀಮಗೌಡರ ಪೊಲೀಸಗೌಡರ , ಮುನ್ನಾ ದೇಸಾಯಿ , ಅಡಿವೆಪ್ಪ ನಾವಲಗಟ್ಟಿ, ರಾಜು ಹಿರೆಅಂಬಿಗೇರ , ಶಿವು ಹಿರೇಮಠ , ಶಶಿಧರ ದೇಮಶಟ್ಟಿ, ತವನಪ್ಪ ಬೆನ್ನಾಡಿ, ಬಸವರಾಜ ಹಿರೇಮಠ, ಶಕೀಲ ಧಾರವಾಡಕರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು