ಗೋಕಾಕ:ಔರಾದಕರ ವರದಿಗೆ ಸಕಾರಾತ್ಮಕವಾಗಿ ಸ್ವಂದಿಸಿರುವ ಸರಕಾರದ ಕ್ರಮ ಸ್ವಾಗತಾರ್ಹ : ಬಸವರಾಜ ಖಾನಪ್ಪನವರ

ಔರಾದಕರ ವರದಿಗೆ ಸಕಾರಾತ್ಮಕವಾಗಿ ಸ್ವಂದಿಸಿರುವ ಸರಕಾರದ ಕ್ರಮ ಸ್ವಾಗತಾರ್ಹ : ಬಸವರಾಜ ಖಾನಪ್ಪನವರ
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 17 :
ಔರಾದಕರ ವರದಿಗೆ ಸಕಾರಾತ್ಮಕವಾಗಿ ಸ್ವಂದಿಸಿರುವ ಸರಕಾರದ ಕ್ರಮ ಸ್ವಾಗತಾರ್ಹ ಎಂದು ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಅಧ್ಯಕ್ಷ ಬಸವರಾಜ ಖಾನಪ್ಪನವರ ಹೇಳಿದರು
ಅವರು ನಗರದ ಪೊಲೀಸ್ ಠಾಣೆಯಲ್ಲಿ ಪೊಲೀಸ ಸಿಬ್ಬಂದಿಗಳಿಗೆ ಸಿಹಿ ವಿತರಿಸಿ ಮಾತನಾಡಿದರು
ಕಳೆದ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ ಔರಾದಕರ ವರದಿಯನ್ನು ಜಾರಿಗೆ ತಂದಿದ್ದು ತುಂಬಾ ಸಂತೋಷದ ವಿಷಯವಾಗಿದೆ . ಕರ್ತವ್ಯದಲ್ಲಿ ಸಾಕಷ್ಟು ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಪೊಲೀಸ ಸಿಬ್ಬಂದಿಗಳಿಗೆ ಔರಾದಕರ ವರದಿಯು ಲಾಭದಾಯಕವಾಗಲಿದೆ ಎಂದು ಖಾನಪ್ಪನವರ ಹೇಳಿದರು .
ಈ ಸಂದರ್ಭದಲ್ಲಿ ಪ್ರೊಫೆಷನರಿ ಡಿಎಸಪಿ ಪ್ರವಿಣ ಎಂ . ಪಿಎಸ್ಐ ಗುರುನಾಥ್ ಚವ್ಹಾಣ , ಕರವೇ ಪದಾಧಿಕಾರಿಗಳಾದ ಕೃಷ್ಣಾ ಖಾನಪ್ಪನವರ , ಸಾದಿಕ ಹಲ್ಯಾಳ , ಸುರೇಶ ಪತ್ತಾರ , ಮುಗುಟ ಪೈಲವಾನ , ಮಲಪ್ಪ ತೆಲಪ್ಪಗೋಳ , ಲಕಪ್ಪ ನಂದಿ , ಅಜರುದ್ದೀನ ಸನದಿ , ಸತ್ತಾರ ಬೇಪಾರಿ , ಗುರು ಮುನ್ನೋಳಿಮಠ , ಹಣುಮಂತ ಅಮ್ಮಣಗಿ , ಅಕ್ಷಯ ಪಾಟೀಲ , ಮಹೇಶ ಪಾಟೀಲ್ , ಯಾಸಿನ ಮುಲ್ಲಾ , ಈರಣ್ಣಾ ನರಸನ್ನವರ , ರಮೇಶ ಬಗ್ಗೆ. ಕೆ , ಆನಂದ ಬಿ.ಕೆ , ರಮೇಶ (ನಾಕಾ) , ಮಹಾಂತೇಶ ಸೊಲ್ಲಬನ್ನವರ ಸೇರಿದಂತೆ ಇತರರು ಇದ್ದರು