RNI NO. KARKAN/2006/27779|Monday, June 16, 2025
You are here: Home » breaking news » ಗೋಕಾಕ:ಗೋವಿನ ಜೋಳಕ್ಕೆ “ಲದ್ದಿಹುಳು ಬಾಧೆ” ಹತೋಟಿಗೆ ಅಗತ್ಯ ಕ್ರಮ ಕೈಗೊಳ್ಳಿ: ಎಚ್.ಡಿ.ಕೊಳೆಕರ

ಗೋಕಾಕ:ಗೋವಿನ ಜೋಳಕ್ಕೆ “ಲದ್ದಿಹುಳು ಬಾಧೆ” ಹತೋಟಿಗೆ ಅಗತ್ಯ ಕ್ರಮ ಕೈಗೊಳ್ಳಿ: ಎಚ್.ಡಿ.ಕೊಳೆಕರ 

ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ರೈತರ ಜಮೀನುಗಳಿಗೆ ಭೇಟಿ ನೀಡಿದ ಚಿಕ್ಕೋಡಿ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಎಚ್. ಡಿ. ಕೊಳೆಕರ ಅವರು ಗೋವಿನಜೋಳ ಬೆಳೆಗೆ ಲದ್ದಿ ಹುಳಿವಿನ ಬಗ್ಗೆ ರೈತರಿಗೆ ಮಾಹಿತಿಯನ್ನು ನೀಡುತ್ತಿರುವುದು.

ಗೋವಿನ ಜೋಳಕ್ಕೆ “ಲದ್ದಿಹುಳು ಬಾಧೆ” ಹತೋಟಿಗೆ ಅಗತ್ಯ ಕ್ರಮ ಕೈಗೊಳ್ಳಿ: ಎಚ್.ಡಿ.ಕೊಳೆಕರ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 11 :

 
ಮೂಡಲಗಿ ಹಾಗೂ ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಗೋವಿನಜೋಳ ಬೆಳೆಗೆ ಲದ್ದಿ ಹುಳು ಎಂಬ ಹೊಸ ಪ್ರದೇಧದ (ಪಾಲ್ ಆರ್ಮಿವರ್ಮ) ಕೀಟ ಕಾಣಿಸಿಕೊಂಡಿದ್ದು ಇದರ ಹತೋಟಿಗಾಗಿ ರೈತರ ಹೆಚ್ಚಿನ ಗಮನ ಹರಿಸಬೇಕೆಂದು ಚಿಕ್ಕೋಡಿ ಉಪ ವಿಭಾಗದ ಉಪ ಕೃಷಿ ನಿರ್ದೇಶಕ ಎಚ್. ಡಿ. ಕೊಳೆಕರ ಸಲಹೆ ನೀಡಿದ್ದಾರೆ.
ಮೂಡಲಗಿ ಹಾಗೂ ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ರೈತರೊಂದಿಗೆ ಅವರು ಮಾತನಾಡಿದರು.
ಈ ಕೀಟವು ಕಳೆದ ವರ್ಷವು ಕೂಡ ಕಾಣಿಸಿಕೊಂಡಿದ್ದ ಪ್ರಸಕ್ತ ವರ್ಷ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಬಿತ್ತನೆ ಮಾಡಿ 15 ದಿನದಿಂದ ಒಂದು ತಿಂಗಳ ಗೋವಿನ ಜೋಳ ಬೆಳೆಯಲ್ಲಿ ಕಾಣಿಸಿಕೊಂಡಿರುತ್ತದೆ. ಈ ಪಾಲ್ ಆರ್ಮಿವರ್ಮ (ಲದ್ದಿಹುಳು) ಕೀಡೆಯು ರಾತ್ರಿ ಸಮಯದಲ್ಲಿ ಗೋವಿನ ಜೋಳದ ಸುಳಿಯಲ್ಲಿ ಇದ್ದು ರಾತ್ರಿ ಸಮಯದಲ್ಲಿ ಬೆಳೆಯನ್ನು ತಿನ್ನುವುದರಿಂದಾಗಿ ಬೆಳೆಗಳು ನಾಶವಾಗುತ್ತವೆ. ಆದ್ದರಿಂದ ಎರಡು ತಾಲೂಕುಗಳ ಗೋವಿನಜೋಳ ಬೆಳೆಯುವ ರೈತರು ಸಮಗ್ರ ಕೀಟ ಹತೋಟಿ ಕ್ರಮಗಳನ್ನು ಅನುಸರಿಸಲು ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ರೈತರಿಗೆ ಸಲಹೆ ನೀಡಿದರು.
ಗೋವಿನಜೋಳದ ಜೊತೆಗೆ ದ್ವಿದಳ ದಾನ್ಯ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯುವುದು. ಕೈಯಿಂದ ತತ್ತಿ ಹಾಗೂ ಮರಿ ಕೀಡೆಗಳನ್ನು ಆರಿಸಿ ನಾಶಪಡಿಸುವುದು ಅಥವಾ ಸೀಮೆಎಣ್ಣೆಯಲ್ಲಿ ಎದ್ದಿ ನಾಶಪಡಿಸುವುದು. ರಾಸಾಯನಿಕ ಔಷಧಿಗಳಾದ ಇವ್ಯಾಮೆಕ್ಮಿನ್ ಬೆಂಜೋಯೆಟ್ 0.2 ಗ್ರಾಂ ಅಥವಾ ಸ್ಪೈನೊಸ್ಯಾಡ್ 0.2 ಎಂ.ಎಲ್ ಅಥವಾ ಸೈನೆಟೊರಮ್ 0.5 ಎಂ. ಎಲ್ ಅಥವಾ ಕ್ಲೊರೊಂಟ್ರಿನಿಪ್ಯೂಲ್ 0.2 ಎಂ.ಎಲ್ ಅಥವಾ ಲ್ಯಾಮಡಾ ಸೈಲೋಥ್ರಿನ್ 0.6 ಎಂ.ಎಲ್ ಪ್ರತಿ ಲೀಟರ ನೀರಿಗೆ ಮಿಶ್ರಣ ಮಾಡಿ ಸುಳಿಯಲ್ಲಿ ಹಾಗೂ ಎಲೆಗಳಿಗೆ ಸಂಪೂರ್ಣವಾಗಿ ಸಾಯಂಕಾಲ ಅಥವಾ ಬೆಳಿಗ್ಗೆ ಸಮಯದಲ್ಲಿ ಸಿಂಪರಣೆ ಮಾಡಬೇಕು ಎಂದು ಅವರು ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ
ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದಾಫ ಅವರು ಮಾತನಾಡಿ ಲದ್ದಿ ಹುಳಿವಿನ ಹತೋಟಿಗಾಗಿ ತಾಲೂಕಿನ ರೈತ ಸಂಪರ್ಕ ಕೇಂದ್ರಗಳು ಅಥವಾ ಸಹಾಯಕ ಕೃಷಿ ಅಧಿಕಾರಿಗಳಿಗೆ ಸಂಪರ್ಕಿಸಬೇಕೆಂದು ಕೋರಿದರು.
ತಂಡದಲ್ಲಿ ಕೆ.ವ್ಹಿ.ಕೆ ತುಕ್ಕಾನಟ್ಟಿಯ ವಿಜ್ಞಾನಿ ಡಿ.ಸಿ. ಚೌಗಲಾ, ಕೃಷಿ ಅಧಿಕಾರಿಗಳಾದ ಪರಸಪ್ಪ ಹುಲಗಬಾಳ, ಶಂಕರ ಹಳದಮನಿ ಮತ್ತು ಬಿ.ಟಿ.ಎಂ. ಛಾಯಾ ಪಾಟೀಲ ಕೃಷಿ ಇಲಾಖೆ ಸಿಬ್ಬಂದಿ ಇದ್ದರು.

Related posts: